ಬಾಗಲಕೋಟೆ: ‘ಜಮಖಂಡಿಯಲ್ಲಿ ನಡೆದ ಸಭೆಯ ಹಿಂದೆ ಯಾರಿದ್ದಾರೆ ಎಂಬುದು ಸಮಾಜದ ಎಲ್ಲರಿಗೂ ಗೊತ್ತಿದೆ. ಶೀಘ್ರ ಅದು ಬಹಿರಂಗವಾಗಲಿದೆ. ಮೂರನೇ ಪೀಠದ ನಿರ್ಧಾರದ ಬಗ್ಗೆ ನಾನು ತಲೆಕೆಡಿಸಿಕೊಳ್ಳೊಲ್ಲ. ಆ ಬಗ್ಗೆ ಏನೂ ಮಾತಾಡೊಲ್ಲ’ ಎಂದು ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದರು.
‘2ಎ ಮೀಸಲಾತಿ ಚಳವಳಿ ಹತ್ತಿಕ್ಕಲು ಬೇರೆ ಬೇರೆ ಬೆಳವಣಿಗೆ ನಡೆಯುತ್ತಿವೆ. ಇದು ಕೂಡ ಅದರ ಭಾಗ. ಸಮಾಜದ ಏಳಿಗೆಗೆ ನಾನು ದುಡಿಯುವುದು ಸಹಿಸಲು ಆಗದೇ ಹೊಟ್ಟೆಕಿಚ್ಚಿನಿಂದ ಹೀಗೆ ಮಾಡಲಾಗುತ್ತಿದೆ’ ಎಂದರು.
ಪ್ರತಿಕ್ರಿಯಿಸಲ್ಲ: ‘ನಮ್ಮ ಹರಿಹರ ಪೀಠದ ಬಗ್ಗೆ ಏನಾದರೂ ಕೇಳಿ ನಾನು ಉತ್ತರಿಸುವೆ. ಆದರೆ ಬೇರೆ ಸಂಗತಿಗಳ ಬಗ್ಗೆ ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.