ಬೆಂಗಳೂರು:ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಮಯ ಫಿಕ್ಸ್ ಆಗಿದ್ದು, ಸರ್ಕಾರ ರಚನೆಗೆ ಕಾರಣರಾದವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು,ಸಂಪುಟದಲ್ಲಿ ಹಿರಿಯ ಸಚಿವರ ತ್ಯಾಗ ಪ್ರಸ್ತಾವ ಇಲ್ಲ, ಸಚಿವ ಮಾಧುಸ್ವಾಮಿ ಅವರದು ವೈಯಕ್ತಿಕ ಹೇಳಿಕೆ ಎಂದರು. ಸಿದ್ದರಾಮಯ್ಯ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಸಿದ್ದರಾಮಯ್ಯ ಅವರೇ ಪಕ್ಷದಲ್ಲಿ ಅಪ್ರಸ್ತುತರಾಗುತ್ತಿದ್ದು, ಮತ್ತೆ ವಕೀಲಿಕೆಗೆ ಅರ್ಜಿ ಹಾಕಲು ಹೊರಟಿದ್ದಾರೆ, ಫ್ಫ್ರೀ ಕಾಶ್ಮೀರ ಘೋಷಣೆ ಕೂಗಿದವರ ಪರವಾಗಿ ವಕಾಲತು ನಡೆಸಲಿ ಎಂದು ಕುಟುಕಿದರು.
ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ ಬೆಂಗಳೂರು ನಗರ ಹಾಗೂಗ್ರಾಮಾಂತರ ಜಿಲ್ಲೆಗಳ 10 ಸಾವಿರ ಮಂದಿಗೆ ಮಂಗಳವಾರ ಹಕ್ಕುಪತ್ರ ವಿತರಿಸಲಾಗುವುದು.ಕಾರ್ಯಕ್ರಮಕ್ಕೆ ಆಗಮಿಸುವವರಿಗೆಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದ ವಿವಿಧ ಭಾಗಗಳಲ್ಲಿ ವಾಹನ ಪಾರ್ಕಿಂಗ್ಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.