ಹಾಸನ : ‘ನಮಗೆ ಆಪರೇಷನ್ ಕಮಲದ ಭೀತಿಯಿಲ್ಲ. ಬಿಜೆಪಿ ಸಂಪರ್ಕದಲ್ಲಿರುವ ಒಬ್ಬ ಜೆಡಿಎಸ್ ಶಾಸಕ ಹೆಸರನ್ನು ಬಿಜೆಪಿ ಮುಖಂಡರು ಹೇಳಲಿ.ಜೆಡಿಎಸ್ ಸಂಪರ್ಕದಲ್ಲಿರುವ ಹತ್ತು ಬಿಜೆಪಿ ಶಾಸಕರ ಹೆಸರನ್ನು ಹೇಳುತ್ತೇವೆ’ ಎಂದು ಪ್ರವಾಸೋದ್ಯಮ ಸಚಿವ ಸಾ.ರ.ಮಹೇಶ್ ಹೇಳಿದ್ದಾರೆ.
ಹಾಸನದಹೊಯ್ಸಳ ರೆಸಾರ್ಟ್ನಲ್ಲಿ ಜೆಡಿಎಸ್ ಶಾಸಕರು ತಂಗಿರುವ ಹಿನ್ನಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿಶಾಸಕಾಂಗ ಸಭೆ ನಡೆದಿದೆ. ಹಾಸನದಲ್ಲಿ ಮುಖ್ಯಮಂತ್ರಿ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ ಜೆಡಿಎಎಲ್ಪಿ ಸಭೆ ನಡೆಯಿತು’ ಎಂದಿದ್ದಾರೆ.
‘ಶಾಸಕ ರೇಣುಕಾಚಾರ್ಯ ಅವರಿಗೆ ರಾಜಕೀಯದ ಬಗ್ಗೆ ಪೂರ್ಣ ಅರಿವಿಲ್ಲ. ನಾನು ಒಮ್ಮೆ ಮಾತ್ರ ಸಚಿವನಾಗಿದ್ದೇನೆ.ಅವರು ನಾಲ್ಕೈದು ಭಾರಿ ಸಚಿವರಾಗಿದ್ದಾರೆ ಹಾಗಾಗಿ ಅವರ ಬಗ್ಗೆ ಮಾತನಾಡುವುದಿಲ್ಲ. ನಮ್ಮಲ್ಲೂ ಮಾಜಿ ಪ್ರಧಾನಿ, ಎರಡೆರಡು ಭಾರಿ ಸಿಎಂ ಆದವರು ಇದ್ದಾರೆ’ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
‘ಆಪರೇಷನ್ ಕಮಲದ ಬಗ್ಗೆ ಮಾಧ್ಯಮಗಳಲ್ಲಿ ಸುಳ್ಳು ವರದಿ ಬರುತ್ತಿದೆ. ಹಾಗಾಗಿ ಈ ಬಗ್ಗೆಆಯಾ ಮಾಧ್ಯಮಗಳನ್ನೇ ಪ್ರಶ್ನೆ ಮಾಡಬೇಕು ಎಂದುಕೊಂಡಿದ್ದೇನೆ’ ಎಂದರು. ‘ರಾಜಕಾರಣದಲ್ಲಿ ಬಿಜೆಪಿಯವರು ಹಸ್ತಕ್ಷೇಪ ಮಾಡಿದ್ರೆ ನಾವೂ ಏನು ಅನ್ನೋದನ್ನು ತೋರಿಸುತ್ತೇವೆ’ ಎಂದು ಗುಡುಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.