ಅಥಣಿ: ‘ಉಪ ಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದನ್ನು ಸ್ವಾಗತಿಸುತ್ತೇನೆ. ಮುಂದಿನ ದಿನಗಳಲ್ಲೂ ನಮ್ಮ ಪರವಾಗಿಯೇ ತೀರ್ಪು ಬರುವ ನಿರೀಕ್ಷೆ ಇದೆ’ ಎಂದು ಅನರ್ಹ ಶಾಸಕ ಮಹೇಶ ಕುಮಠಳ್ಳಿ ಪ್ರತಿಕ್ರಿಯಿಸಿದರು.
ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ತೀರ್ಪು ನಮ್ಮ ಪರವಾಗಿ ಬಂದರೆ ನಾವೇ ಶಾಸಕರಾಗಿ ಉಳಿಯುತ್ತೇವೆ’ ಎಂದರು.
‘ಶಾಸಕ ಎಂ.ಬಿ. ಪಾಟೀಲ ಅವರು ನಮ್ಮ ಮಾರ್ಗದರ್ಶನಕರು. ನಾನು ಬಿಜೆಪಿಯವರಿಂದ ₹50 ಕೋಟಿ ಪಡೆದಿದ್ದೇವೆ ಎನ್ನುವುದು ಸುಳ್ಳು. ಅವರು ಯಾವ ಅರ್ಥದಲ್ಲಿ, ಏನು ಕಲ್ಪಿಸಿಕೊಂಡು ಆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಕ್ಷೇತ್ರದ ಜನರೊಂದಿಗೆ ನಾನು ಸಂಪರ್ಕ ಕಡಿದುಕೊಂಡಿಲ್ಲ. ಜನರಿಗೆ ವಾಸ್ತವ ಗೊತ್ತಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.