ADVERTISEMENT

ಕಾಂಗ್ರೆಸ್‌ ಸೇರಿದ ಶೆಟ್ಟರ್‌: ಟ್ವೀಟ್‌ ಮಾಡಿ ನಟ ಚೇತನ್‌ ಹೇಳಿದ್ದೇನು? 

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 8:26 IST
Last Updated 18 ಏಪ್ರಿಲ್ 2023, 8:26 IST
ನಟ ಚೇತನ್‌
ನಟ ಚೇತನ್‌    

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಬಗ್ಗೆ ನಟ ಚೇತನ್‌ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ ಪಕ್ಷ ಸೇರಿರುವುದರಿಂದ ಎರಡು ವಿಷಯಗಳು ಬಹಿರಂಗಗೊಂಡಿವೆ. ಒಂದು, ಶೆಟ್ಟರ್‌ ಅವರು ಎಂದಿಗೂ ಸಿದ್ಧಾಂತದಿಂದ ಹಿಂದುತ್ವವಾದಿಯಾಗಿರಲಿಲ್ಲ. ಇದು ಒಳ್ಳೆಯದು ಎಂದು ಚೇತನ್‌ ಹೇಳಿದ್ದಾರೆ.

ADVERTISEMENT

ಎರಡನೇಯದು, ಅವರು ಅಧಿಕಾರ ಬಯಸುತ್ತಿರುವ ಮತ್ತೊಬ್ಬ ಅವಕಾಶವಾದಿ ರಾಜಕಾರಣಿ. ಇದು ಕೆಟ್ಟದ್ದು ಎಂದು ಹೇಳಿದ್ದಾರೆ.

ಅಜೀವವಾಗಿ ಬಿಜೆಪಿಯಲ್ಲೇ ಇರುವುದು ಯೋಗ್ಯ ಪ್ರಶ್ನಾರ್ಹವಾಗಿದೆ ಹಾಗೂ ಪಕ್ಷಾಂತರ ಮಾಡುವ ಪರಂಪರೆ ಖಂಡಿತವಾಗಿಯೂ ಪ್ರಶ್ನಾರ್ಹವಾಗಿದೆ ಎಂದು ಜಗದೀಶ ಶೆಟ್ಟರ್‌ ವಿಚಾರದಲ್ಲಿ ಚೇತನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.