ಟೊರಂಟೊ: ಸುಲಿಗೆ ಹಾಗೂ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಆರೋಪಗಳ ಅಡಿಯಲ್ಲಿ ಭಾರತ ಮೂಲದ ಐದು ಮಂದಿಯನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ದಕ್ಷಿಣ ಏಷ್ಯಾದ ವಾಣಿಜ್ಯೋದ್ಯಮಿಗಳನ್ನು ಗುರಿಯಾಗಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರಲ್ಲಿ ಇಬ್ಬರು ಮಹಿಳೆಯರು ಇದ್ದಾರೆ.
ಗಗನ್ ಅಜಿತ್ ಸಿಂಗ್, ಅನ್ಮೋಲ್ದೀಪ್ ಸಿಂಗ್, ಹಶ್ಮೀತ್ ಕೌರ್, ಇಯಾಮ್ಜೋತ್ ಕೌರ್, ಅರುಣದೀಪ್ ಥಿಂಡ್ ಬಂಧಿತರು. ಮೊದಲ ನಾಲ್ಕು ಮಂದಿಯ ವಿರುದ್ಧ ಸುಲಿಗೆ, ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಹೊಂದಿರುವುದು, ನಿರ್ಬಂಧಿತ ಅಥವಾ ನಿಷೇಧಿತ ಆಯುಧಗಳನ್ನು ಅಕ್ರಮವಾಗಿ ಹೊಂದಿರುವುದು, ವಂಚನೆ ಆರೋಪಗಳನ್ನು ಹೊರಿಸಲಾಗಿದೆ. ಅರುಣದೀಪ್ ಅವರ ವಿರುದ್ಧ ಸುಲಿಗೆ ಆರೋಪ ಹೊರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.