ಕೊಚ್ಚಿ: ಮಾಜಿ ಬಿಷಪ್ ಜಲಂಧರ್ ಡಯಾಸಿಸ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ದನಿ ಎತ್ತಿದ್ದ ಸನ್ಯಾಸಿನಿ ವ್ಯಾಟಿಕನ್ ಮೊರೆ ಹೋಗಿದ್ದಾರೆ.
ಡಯಾಸಿಸ್ ವಿರುದ್ಧ ಕೇಳಿಬಂದಿದ್ದ ಅತ್ಯಾಚಾರ ಪ್ರಕರಣದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಿದವರಲ್ಲಿ ಸಿಸ್ಟರ್ ಲೂಸಿ ಕಳಪ್ಪುರ ಅವರೂ ಒಬ್ಬರು. ಅವರನ್ನು ಫ್ರಾನ್ಸಿಸನ್ ಕ್ಲಾರಿಸ್ಟ್ ಸಭೆಯಿಂದ ಉಚ್ಚಾಟನೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಲೂಸಿ ವ್ಯಾಟಿಕನ್ಗೆ ದೂರು ನೀಡಿದ್ದಾರೆ.
ತಮ್ಮ ಉಚ್ಚಾಟನೆಯು ಸರಿಯಾದ ನಿರ್ಧಾರವಲ್ಲ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.