ಜೊಹಾನ್ಸ್ಬರ್ಗ್: ಹರಿಣಗಳ ನಾಡು ದಕ್ಷಿಣ ಆಫ್ರಿಕಾದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಭಾರತದ ಕೌನ್ಸಲ್ ಜನರಲ್ ಅಂಜು ರಂಜನ್ ಅವರು ಶನಿವಾರ ‘ಇಂಡಿಯಾ ಹೌಸ್’ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಕ್ಷಿಣ ಆಫ್ರಿಕಾ ಮೂಲದ ರಾಜತಾಂತ್ರಿಕರು ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
‘ಜೊಹಾನ್ಸ್ಬರ್ಗ್ ಅನ್ನು ‘ಬೆಳಕಿನ ನಗರಿ’ ಎಂದೇ ಕರೆಯಲಾಗುತ್ತದೆ. ಚಿನ್ನವನ್ನು ಅರಸಿ ಗ್ರಾಮೀಣ ಭಾಗದಿಂದ ಬರುತ್ತಿದ್ದ ವಲಸಿಗರು ಈ ನಗರವನ್ನು ಹೀಗೆ ಕರೆಯುತ್ತಿದ್ದರು’ ಎಂದು ಜೊಹಾನ್ಸ್ಬರ್ಗ್ ನಗರದ ಮೇಯರ್ ಜಿಯೊಫ್ ಮಖುಬೊ ಅವರು ಹೇಳಿದರು.
ಇದನ್ನೂ ಓದಿ:ದೀಪಾವಳಿಯ ಶುಭಾಶಯ ಕೋರಿದ ಪ್ರಮುಖ ಜಾಗತಿಕ ನಾಯಕರು
‘ದೀಪಾವಳಿಯ ಸಂದರ್ಭದಲ್ಲಿ ದೀಪಗಳನ್ನು ಬೆಳಗುವ ಮೂಲಕ ಕತ್ತಲೆ ಹೊಡೆದೋಡಿಸಲಾಗುತ್ತದೆ. ಹಬ್ಬದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೊಸಾ ಅವರು ಕೋವಿಡ್ ನಿಯಮಗಳನ್ನು ಸಡಿಲಿಸಿರುವುದು ಖುಷಿಯ ವಿಷಯ. ಹಾಗಂತ ಯಾರೂ ಮೈಮರೆಯಬಾರದು. ಕೋವಿಡ್ ಇನ್ನೂ ದೂರವಾಗಿಲ್ಲ. ಹೀಗಾಗಿ ಎಲ್ಲರೂ ಎಚ್ಚರದಿಂದ ಇರಬೇಕು’ ಎಂದರು.
‘ದೀಪಾವಳಿಯ ಸಂದರ್ಭದಲ್ಲಿ ಹಚ್ಚುವ ಹಣತೆಗಳು ಕತ್ತಲನ್ನು ದೂರಮಾಡಲಿ. ಒಳ್ಳೆಯ ತನವು ಪ್ರಜ್ವಲಿಸಲಿ. ವಿಶ್ವದೆಲ್ಲೆಡೆ ಶಾಂತಿ ಪಸರಿಸಲಿ’ ಎಂದುಮಖುಬೊ ನುಡಿದರು.
‘ಪ್ರಾಚೀನ ಆರೋಗ್ಯ ವ್ಯವಸ್ಥೆಯ ಪಿತಾಮಹ ಎಂದೇ ಕರೆಯಲ್ಪಡುವ ಧನ್ವಂತರಿ ಅವರ ನೆನಪಾರ್ಥ ಭಾರತ ಸರ್ಕಾರವು ನವೆಂಬರ್13ನ್ನು ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಆಚರಿಸುತ್ತಿದೆ’ ಎಂದು ರಂಜನ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.