ADVERTISEMENT

ಭಾರತದಲ್ಲಿ ಆಶ್ರಯ ಕೋರಿದ 6,000 ಮ್ಯಾನ್ಮಾರ್‌ ನಿರಾಶ್ರಿತರು

ಪಿಟಿಐ
Published 20 ಮೇ 2021, 6:40 IST
Last Updated 20 ಮೇ 2021, 6:40 IST
ಮ್ಯಾನ್‌ಮಾನ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ನಡೆಯುತ್ತಿರುವ ಹೋರಾಟ-ಎಎಫ್‌ಪಿ
ಮ್ಯಾನ್‌ಮಾನ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ನಡೆಯುತ್ತಿರುವ ಹೋರಾಟ-ಎಎಫ್‌ಪಿ    

ವಿಶ್ವಸಂಸ್ಥೆ: ಮ್ಯಾನ್ಮಾರ್‌ನ 4,000– 6,000 ನಿರಾಶ್ರಿತರು ಭಾರತದಲ್ಲಿ ಆಶ್ರಯ ಕೋರಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆ ಆರಂಭವಾದ ಫೆಬ್ರುವರಿ ತಿಂಗಳಿನಿಂದಲೂ ಅಲ್ಲಿಂದ ವಿವಿಧೆಡೆಗೆ ತೆರಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಕಳೆದ ವಾರದವರೆಗೆ 60,700 ಮಂದಿ ಮಹಿಳೆಯರು, ಪುರುಷರು ಮತ್ತು ಮಕ್ಕಳನ್ನು ಆಂತರಿಕವಾಗಿ ಸ್ಥಳಾಂತರಿಸಲಾಗಿದೆ.

ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ 1,700ಕ್ಕೂ ಹೆಚ್ಚು ನಿರಾಶ್ರಿತರು ಥಾಯ್ಲೆಂಡ್‌ಗೆ ಬಂದಿದ್ದು ಇವರಲ್ಲಿ ಅನೇಕರು ನಂತರದಲ್ಲಿ ಮ್ಯಾನ್ಮಾರ್‌ಗೆ ಮರಳಿದ್ದಾರೆ. ಸುಮಾರು 4,000–6,000 ಮಂದಿ ಭಾರತದಲ್ಲಿ ರಕ್ಷಣೆ ಕೋರಿದ್ದಾರೆ ಎಂದು ವಿಶ್ವಸ್ಥಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಅವರ ವಕ್ತಾರ ಸ್ಟೀಫನ್‌ ಡುಜ್ಯಾರಿಕ್‌ ವರದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ಮ್ಯಾನ್ಮಾರ್‌ ಭಾರತದೊಂದಿಗೆ ಸುಮಾರು 1,600 ಕಿ.ಮೀ ಉದ್ದದವರೆಗೆ ಬೇಲಿ ಹಾಕಿಲ್ಲದ ಗಡಿಯನ್ನು ಹೊಂದಿದೆ. ಮ್ಯಾನ್ಮಾರ್‌ನೊಂದಿಗೆ ಭಾರತದ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಮಣಿಪುರ ಮತ್ತು ಮಿಜೋರಂ ಗಡಿಯನ್ನು ಹಂಚಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.