ADVERTISEMENT

ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ; ಬಹಿರಂಗ ಪ್ರಚಾರ ಅಂತ್ಯ

ಏಜೆನ್ಸೀಸ್
Published 28 ಡಿಸೆಂಬರ್ 2018, 17:32 IST
Last Updated 28 ಡಿಸೆಂಬರ್ 2018, 17:32 IST
ಢಾಕಾದಲ್ಲಿ ಬಹಿರಂಗ ರ‍್ಯಾಲಿ ನಡೆಸಿದ ಅವಾಮಿ ಲೀಗ್‌ನ ಕಾರ್ಯಕರ್ತರು–ಎಪಿ/ಪಿಟಿಐ ಚಿತ್ರ
ಢಾಕಾದಲ್ಲಿ ಬಹಿರಂಗ ರ‍್ಯಾಲಿ ನಡೆಸಿದ ಅವಾಮಿ ಲೀಗ್‌ನ ಕಾರ್ಯಕರ್ತರು–ಎಪಿ/ಪಿಟಿಐ ಚಿತ್ರ   

ಢಾಕಾ: ಬಾಂಗ್ಲಾದೇಶದ ಸಾವ್ರರ್ತಿಕ ಚುನಾವಣೆ ಬಹಿರಂಗ ಪ್ರಚಾರ ಶುಕ್ರವಾರ ಮುಕ್ತಾಯಗೊಂಡಿದ್ದು, ಭಾರೀ ಹಿಂಸಾಚಾರ, ಪ್ರತಿಪಕ್ಷ ಕಾರ್ಯಕರ್ತರ ಬಂಧನ ನಡೆದಿದೆ. ಈ ಬೆಳವಣಿಗೆ ಕುರಿತಂತೆ ಅಂತರರಾಷ್ಟ್ರೀಯ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದೆ.

ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಕ್ಷ (ಬಿಎನ್‌ಪಿ) ಬೆಂಬಲಿಗರು ಆಡಳಿತರೂಢಾ ಅವಾಮಿ ಲೀಗ್‌ನ ಪಕ್ಷದ ಕಾರ್ಯಕರ್ತರೊಬ್ಬರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಪಕ್ಷದ 19 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಬಿಎನ್‌ಪಿ ನಾಯಕರು ತಿಳಿಸಿದ್ದಾರೆ.

ಏಳು ವಾರಗಳ ಕಾಲ ದೇಶದಾದ್ಯಂತ ನಡೆದ ಬಹಿರಂಗ ಚುನಾವಣಾ ಪ್ರಚಾರ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯಗೊಂಡಿತು. ಭಾನುವಾರ ಮತದಾನ ನಡೆಯಲಿದ್ದು, ಕೊನೆಹಂತದಲ್ಲಿ ಮತದಾರರ ಮನಗೆಲ್ಲಲು, ಅವಾಮಿಲೀಗ್‌ನ ಬೆಂಬಲಿಗರು ರಾಜಧಾನಿ ಢಾಕಾದಲ್ಲಿ ಬೃಹತ್‌ ರ‍್ಯಾಲಿ ನಡೆಸಿದರು. ದೇಶದ ಕೆಲವು ಕಡೆಗಳಲ್ಲಿ ಅವಾಮಿಲೀಗ್‌– ಬಿಎನ್‌ಪಿ ಪಕ್ಷದ ಕಾರ್ಯಕರ್ತರು ಮಾರಾಮಾರಿ ನಡೆಸಿದ ಪ್ರಕರಣಗಳು ವರದಿಯಾಗಿದೆ.

ADVERTISEMENT

ಸಮೀಕ್ಷೆಗಳ ಪ್ರಕಾರ, ಶೇಕ್‌ ಹಸೀನಾ ಸತತ ನಾಲ್ಕನೇ ಅವಧಿಗೂ ಸುಲಭವಾಗಿ ಜಯಗಳಿಸಲಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.