ಕನೌಜ್: ಇಲ್ಲಿನ ಸ್ಥಳೀಯ ಸಮಾಜವಾದಿ ಪಕ್ಷದಮುಖಂಡರೊಬ್ಬರು ಅಕ್ರಮವಾಗಿ ವಶಕ್ಕೆ ಪಡೆದಿದ್ದ ಸರ್ಕಾರಿ ಜಮೀನನ್ನು ಉತ್ತರ ಪ್ರದೇಶದ ಸರ್ಕಾರ ಬುಲ್ಡೊಜರ್ ಬಳಸಿ ಸ್ವಾಧೀನಕ್ಕೆ ಪಡೆದುಕೊಂಡಿದೆ.ಜಿಲ್ಲೆಯ ಸರ್ಕಾರಿ ಭೂಮಿಯಲ್ಲಿ ಎಸ್ಪಿ ನಾಯಕ ರಜನಿಕಾಂತ್ ಯಾದವ್ ನಿರ್ಮಿಸಿದ್ದ 'ಅಕ್ರಮ'ಕಟ್ಟಡವನ್ನು ಜಿಲ್ಲಾಡಳಿತ ನೆಲಸಮಗೊಳಿಸಿದ ಒಂದು ವಾರದ ಬೆನ್ನಲ್ಲೇ, ಉತ್ತರ ಪ್ರದೇಶ ಸರ್ಕಾರ ಈ ಕ್ರಮ ಕೈಗೊಂಡಿದೆ.
₹24 ಲಕ್ಷ ಮೌಲ್ಯದ 4800 ಚದರ ಮೀಟರ್ ಸರ್ಕಾರಿ ಜಾಗವನ್ನು ಯಾದವ್ ಅವರು ಅಕ್ರಮವಾಗಿ ವಶಕ್ಕೆ ಪಡೆದು, ಅದರಲ್ಲಿ ಕಟ್ಟಡ ನಿರ್ಮಿಸಿದ್ದರು ಎನ್ನಲಾಗಿದೆ. ಆ ಕಟ್ಟಡವನ್ನು ಕಳೆದ ಶನಿವಾರವಷ್ಟೇ ಜಿಲ್ಲಾಡಳಿತ ನೆಲಸಮ ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.