ADVERTISEMENT

ಉಗ್ರರನ್ನು ಹಸ್ತಾಂತರಿಸುವಂತೆ ಪಾಕಿಸ್ತಾನಕ್ಕೆ ಭಾರತ ಸೂಚನೆ

ದಾವೂದ್‌ ಹಸ್ತಾಂತರಕ್ಕೆ ಪರೋಕ್ಷ ಆಗ್ರಹ

ಪಿಟಿಐ
Published 15 ನವೆಂಬರ್ 2019, 20:01 IST
Last Updated 15 ನವೆಂಬರ್ 2019, 20:01 IST
ಜೈಶಂಕರ್‌ 
ಜೈಶಂಕರ್‌    

ಲಂಡನ್‌: ‘ಭಾರತದ ಜತೆ ಉತ್ತಮ ಸಂಬಂಧವಿಟ್ಟುಕೊಳ್ಳಬೇಕು ಎಂಬ ಗಂಭೀರ ಇಚ್ಛೆ ಪಾಕಿಸ್ತಾನಕ್ಕೆ ಇದ್ದರೆ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿ ಪಾಕಿಸ್ತಾನದಲ್ಲಿ ಅವಿತಿರುವ ಭಾರತೀಯರನ್ನು ಹಸ್ತಾಂತರಿಸಲಿ’ ಎಂದು ವಿದೇಶಾಂಗ ಸಚಿವ ಜೈಶಂಕರ್‌ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಅಡಗಿರುವ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಹಸ್ತಾಂತರಿಸುವ ಕುರಿತು ಪರೋಕ್ಷವಾಗಿ ಜೈಶಂಕರ್‌ ಈ ಹೇಳಿಕೆ ನೀಡಿದ್ದಾರೆ.

ಫ್ರಾನ್ಸ್‌ನ ದೈನಿಕ ‘ಲು ಮೊಂಡ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೈಶಂಕರ್‌, ‘ಉಗ್ರರನ್ನು ಪೋಷಿಸುತ್ತಿರುವಪಾಕಿಸ್ತಾನದ ಜತೆಗೆ ಸಂಬಂಧ ‘ಕಷ್ಟಸಾಧ್ಯ’. ಭಾರತಕ್ಕೆ ಉಗ್ರರನ್ನು ಕಳುಹಿಸುತ್ತಿರುವುದರ ಬಗ್ಗೆ ಪಾಕಿಸ್ತಾನ ನಿರಾಕರಿಸುವುದಿಲ್ಲ. ತನ್ನ ನೆಲದಲ್ಲಿ ಭಯೋತ್ಪಾದನೆ ಎಂಬ ಕೈಗಾರಿಕೆ ಅಭಿವೃದ್ಧಿಪಡಿಸಿರುವ ಪಾಕಿಸ್ತಾನ, ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸುತ್ತಿದೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.