ADVERTISEMENT

ಶ್ರೀಲಂಕಾಗೆ ₹4,000 ಕೋಟಿ ಪ್ಯಾಕೇಜ್‌ ಘೋಷಿಸಿದ ಭಾರತ

ದಿತ್ವಾದಿಂದ ತತ್ತರಿಸಿದ ಲಂಕಾ ಮರು ನಿರ್ಮಾಣಕ್ಕೆ ಭಾರತ ಬದ್ಧ: ಜೈಶಂಕರ್

ಪಿಟಿಐ
Published 23 ಡಿಸೆಂಬರ್ 2025, 14:56 IST
Last Updated 23 ಡಿಸೆಂಬರ್ 2025, 14:56 IST
ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ ಅವರನ್ನು ಕೊಲಂಬೊದಲ್ಲಿ ಮಂಗಳವಾರ ಭೇಟಿಯಾಗಿ, ಮಾತುಕತೆ ನಡೆಸಿದರು – ಪಿಟಿಐ ಚಿತ್ರ
ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ ಅವರನ್ನು ಕೊಲಂಬೊದಲ್ಲಿ ಮಂಗಳವಾರ ಭೇಟಿಯಾಗಿ, ಮಾತುಕತೆ ನಡೆಸಿದರು – ಪಿಟಿಐ ಚಿತ್ರ   

ಕೊಲಂಬೊ: ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾದ ಮರು ನಿರ್ಮಾಣಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಭಾರತವು ಮಂಗಳವಾರ  ₹4.28 ಸಾವಿರ ಕೋಟಿ (450 ಮಿಲಿಯನ್‌ ಡಾಲರ್‌) ಪ್ಯಾಕೇಜ್‌ ಘೋಷಿಸಿದೆ.

ಎರಡು ದಿನಗಳ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ಪ್ರಧಾನಿ ಹರಿಣಿ ಅಮರಸೂರ್ಯ ಅವರನ್ನು ಭೇಟಿ ಮಾಡಿದ ವೇಳೆ ಈ ಕುರಿತು ಘೋಷಿಸಿದ್ದಾರೆ. ನಂತರ ಅವರು, ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ಅವರೊಂದಿಗೆ ಮಾತುಕತೆ ನಡೆಸಿದರು.

ಉದ್ಘಾಟನೆ: ಕಿಲಿನೊಚ್ಚಿ ಜಿಲ್ಲೆಯ ಬೈಲೆ ಸೇತುವೆಯನ್ನು ಜೈಶಂಕರ್‌ ಉದ್ಘಾಟಿಸಿದ್ದಾರೆ. 

ADVERTISEMENT