ಬೀಜಿಂಗ್: ಗಡಿ ಪರಿಸ್ಥಿತಿಯ ಬಗ್ಗೆ ಭಾರತದ ಜೊತೆಗಿನ ರಾಜತಾಂತ್ರಿಕ ಮಾತುಕತೆ ಮುಕ್ತವಾಗಿತ್ತು ಎಂದು ಚೀನಾ ಗುರುವಾರ ಹೇಳಿದೆ. ಗಡಿ ವಿಚಾರದ ಬಗ್ಗೆ ನವದೆಹಲಿಯಲ್ಲಿ ಉಭಯ ದೇಶಗಳು ಬುಧವಾರ ಮಾತುಕತೆ ನಡೆಸಿದ್ದವು.
ಸಭೆಯ ಕುರಿತು ಇಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯ, ಮಾತುಕತೆಯು ಯಾವುದೇ ಮುಚ್ಚುಮರೆಯಿಲ್ಲದೆ ಮುಕ್ತವಾಗಿ ನಡೆಯಿತು ಎಂದು ಹೇಳಿದೆ.
‘ಚೀನಾ–ಭಾರತ ಗಡಿ ಕುರಿತ 23ನೇ ವಿಶೇಷ ಪ್ರತಿನಿಧಿಗಳ ಸಭೆಯಲ್ಲಿನ ತೀರ್ಮಾನಗಳನ್ನು ಜಾರಿಗೆ ತರಲು ಎರಡೂ ದೇಶಗಳು ಗಂಭೀರವಾಗಿ ಚರ್ಚಿಸಿ, 24ನೇ ವಿಶೇಷ ಪ್ರತಿನಿಧಿಗಳ ಸಭೆಗೆ ಒಟ್ಟಾಗಿ ಸಿದ್ಧತೆ ನಡೆಸಲು ಒಟ್ಟಿಕೊಂಡವು’ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.