ADVERTISEMENT

ಭಾರತದಿಂದ ನೀರು ಬಿಡುಗಡೆ, ಪ್ರವಾಹ ಸಾಧ್ಯತೆ: ಪಾಕ್ ಟೀಕೆ

ಪಿಟಿಐ
Published 19 ಆಗಸ್ಟ್ 2019, 20:15 IST
Last Updated 19 ಆಗಸ್ಟ್ 2019, 20:15 IST
ಕಾಶ್ಮೀರದ ಕಾರಕೊರಮ್ ಹೆದ್ದಾರಿಯಿಂದ ಕಾಣುವ ಸಿಂಧು ನದಿ (Pic Courtesy- wikipedia)
ಕಾಶ್ಮೀರದ ಕಾರಕೊರಮ್ ಹೆದ್ದಾರಿಯಿಂದ ಕಾಣುವ ಸಿಂಧು ನದಿ (Pic Courtesy- wikipedia)   

ಇಸ್ಲಾಮಾಬಾದ್: ‘ಭಾರತ ಯಾವುದೇ ಮುನ್ಸೂಚನೆ ನೀಡದೆ ಸಟ್ಲೇಜ್ ನದಿಗೆ 2 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದೆ. ಇದರಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಪ್ರವಾಹದ ರೀತಿಯ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ’ ಎಂದು ಪಾಕಿಸ್ತಾನ ಸೋಮವಾರ ಹೇಳಿದೆ.

‘ಭಾರತದ ಪಂಜಾಬ್ ಭಾಗದಲ್ಲಿ ರುವ ಸಟ್ಲೇಜ್ ನದಿಯ ನೀರು ಯಾವುದೇ ಸಮಯದಲ್ಲಾದರೂ ಪಾಕಿ ಸ್ತಾನದ ಭಾಗವನ್ನು ಪ್ರವೇಶಿಸಬಹುದು’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ವಕ್ತಾರ ಬ್ರಿಗೇಡಿಯರ್ ಮುಖ್ತರ್ ಅಹ್ಮದ್ ತಿಳಿಸಿದ್ದಾರೆ.

ಸಟ್ಲೇಜ್ ನದಿ ತೀರದಲ್ಲಿರುವ ಕಸೂರ್ ಹಾಗೂ ಇತರೆ ಜಿಲ್ಲೆಗಳಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಭಾಕ್ರಾ ಅಣೆಕಟ್ಟಿನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಬೇಕಾಯಿತು ಎಂದು ಭಾರತದ ಜಲಂಧರ್‌ನ ಉಪ ಆಯುಕ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.