ಸಿಂಗಪುರ: ಸಿಂಗಪುರದಈಸ್ಟ್ ಕೋಸ್ಟ್ ಪಾರ್ಕ್ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಭಾರತದ ಹೈಕಮಿಷನರ್ ಪಿ. ಕುಮಾರನ್ ಅವರು ಗಿಡ ನೆಡುವ ಮೂಲಕ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 100 ವಿದ್ಯಾರ್ಥಿಗಳು ಹಾಗೂ ಭಾರತೀಯ ಸಮುದಾಯದ ಮುಖಂಡರು ಭಾಗಿಯಾಗಿದ್ದರು.
‘ಮರಗಳು ಎಲ್ಲರಿಗೂ ಪ್ರಿಯ. ಏಕೆಂದರೆ ಇಂಗಾಲವನ್ನು ಬೇರ್ಪಡಿಸುವ ಅತ್ಯಂತ ಪರಿಣಾಮಕಾರಿ ಸಾಧನಗಳಲ್ಲಿ ಮರಗಳು ಪ್ರಮುಖವಾಗಿವೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮಾಡಿದ ಈ ಪ್ರಯತ್ನದ ಬಗ್ಗೆ ನಮಗೆ ಸಂತೋಷವಿದೆ. ಇಂದು ನೆಟ್ಟಿರುವ ಗಿಡಗಳು ಸಿಂಗಪುರ – ಭಾರತ ನಡುವೆ ಬೆಳೆಯುತ್ತಿರುವ ಬಾಂಧವ್ಯದ ಸಂಕೇತ’ ಎಂದು ಪಿ. ಕುಮಾರನ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.