ADVERTISEMENT

ರಸ್ತೆ ಅಪಘಾತ: ಜೆದ್ದಾದಲ್ಲಿ ತಾತ್ಕಾಲಿಕ ಕಚೇರಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 14:07 IST
Last Updated 18 ನವೆಂಬರ್ 2025, 14:07 IST
-
-   

ದುಬೈ: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾರತದ ಉಮ್ರಾ ಯಾತ್ರಿಕರ ಕುಟುಂಬಗಳ ನೆರವಿಗಾಗಿ ಜೆದ್ದಾದಲ್ಲಿರುವ ಭಾರತೀಯ ಕಾನ್ಸುಲೇಟ್‌, ಮದೀನಾದಲ್ಲಿ ತಾತ್ಕಾಲಿಕ ಕಚೇರಿಯನ್ನು ಸ್ಥಾಪಿಸಿದೆ ಎಂದು ಕಾನ್ಸುಲೇಟ್‌ ಕಚೇರಿ ಮಂಗಳವಾರ ತಿಳಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾನ್ಸುಲೇಟ್‌, ‘ಮದೀನಾದಲ್ಲಿರುವ ಹಜ್‌ ಯಾತ್ರಿಗಳ ಕಚೇರಿಯಲ್ಲಿ ಈ ಸೌಲಭ್ಯ ಆರಂಭಿಸಲಾಗಿದೆ’ ಎಂದು ತಿಳಿಸಿದೆ.

ಕಾನ್ಸುಲ್‌ ಜನರಲ್‌ ಫಹಾದ್‌ ಅಹ್ಮದ್‌ ಖಾನ್ ಸೂರಿ ಅವರು, ಈ ಅಪಘಾತದಲ್ಲಿ ಬದುಳಿದಿರುವ ಏಕೈಕ ಭಾರತೀಯ ಯಾತ್ರಿ ಅಬ್ದುಲ್ ಶೋಯೆಬ್ ಮೊಹಮ್ಮದ್‌ ಅವರನ್ನು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ ಎಂದು ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದೆ.

ADVERTISEMENT

ಅಬ್ದುಲ್‌ ಶೋಯೆಬ್‌ ಮೊಹಮ್ಮದ್ ಅವರಿಗೆ ಮದೀನಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.