ADVERTISEMENT

ನೇಪಾಳದಲ್ಲಿ ಭಾರತದ ವ್ಯಕ್ತಿಯ ಹತ್ಯೆ

ಪಿಟಿಐ
Published 25 ಡಿಸೆಂಬರ್ 2022, 10:56 IST
Last Updated 25 ಡಿಸೆಂಬರ್ 2022, 10:56 IST
   

ಕಠ್ಮಂಡು: ‘ದಕ್ಷಿಣ ಭಾಗದ ನೇಪಾಳದಲ್ಲಿ ಐವರು ಅನಾಮಧೇಯ ಬಂದೂಕುಧಾರಿಗಳು ಭಾರತದ ವ್ಯಕ್ತಿಯೊಬ್ಬರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ’ ಎಂದು ಪೊಲೀಸರು ಶನಿವಾರ ತಿಳಿಸಿದರು.

‘ಶಿವ ಪೂಜನ್‌ ಯಾದವ್‌ (45) ಹತ್ಯೆಯಾದ ವ್ಯಕ್ತಿ. ಮಹಾಗಧಿಮಯಿ ನಗರಸಭೆಯಲ್ಲಿ ಯಾದವ್‌ ಅವರ ಹತ್ಯೆ ಮಾಡಲಾಗಿದೆ. ಎರಡು ಬೈಕ್‌ಗಳಲ್ಲಿ ಬಂದ ಐವರು ಬಂದೂಕುಧಾರಿ ವ್ಯಕ್ತಿಗಳು ಯಾದವ್ ಅವರ ಮೇಲೆ ಗುಂಡು ಹಾರಿಸಿದರು. ಇದರ ಪರಿಣಾಮ ಯಾದವ್‌ ಅವರು ಗಂಭೀರವಾಗಿ ಗಾಯಗೊಂಡರು’ ಎಂದು ಪೊಲೀಸರು ವಿವರಿಸಿದರು.

‘ಘಟನೆ ನಡೆದ ತಕ್ಷಣದಲ್ಲಿ ಯಾದವ್‌ ಅವರನ್ನು ಹತ್ತಿರ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲೇ ಯಾದವ್‌ ಅವರು ಸಾವಿಗೀಡಾದರು. ತನಿಖೆ ಪ್ರಗತಿಯಲ್ಲಿದೆ. ಅನುಮಾನ ಬಂದ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.