ಕೊಲಂಬೊ: ತಮ್ಮ ಗಡಿ ದಾಟಿ ಬಂದು ಅಕ್ರಮವಾಗಿ ಮೀನು ಹಿಡಿಯುತ್ತಿರುವ ಭಾರತೀಯ ಮೀನುಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶ್ರೀಲಂಕಾದ ಉತ್ತರ ಜಾಫ್ನಾ ದ್ವೀಪದಲ್ಲಿ ಮೀನುಗಾರರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂಬಂಧಶ್ರೀಲಂಕಾದ ಮೀನುಗಾರರು ಜಾಫ್ನಾದಲ್ಲಿರುವ ಭಾರತೀಯ ರಾಯಭಾರಿ ಎಸ್. ಬಾಲಾಚಂದ್ರನ್ ಅವರಿಗೆ ಸೋಮವಾರ ದೂರು ನೀಡಿ, ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಭಾರತೀಯ ಮೀನುಗಾರರುವಾಡಮಾರಚಾಚಿ ಸೆಕ್ಟರ್ ಮೂಲಕ ಶ್ರೀಲಂಕಾದ ಸಮುದ್ರದ ಗಡಿಯೊಳಗೆ ಪ್ರವೇಶಿಸುತ್ತಿದ್ದಾರೆ. ಸುಮಾರು 3000 ಮೀನುಗಾರರು ನಮಗೆ ಸೇರಿದ ಸಮುದ್ರದ ಭಾಗದಲ್ಲಿ ಪ್ರತಿನಿತ್ಯ ಮೀನು ಹಿಡಿಯುತ್ತಿದ್ದಾರೆ. ಇದರಿಂದ ಸ್ಥಳೀಯ ಮೀನುಗಾರರಿಗೆ ನಷ್ಟ ಉಂಟಾಗುತ್ತಿದೆ ಎಂದುಪ್ರತಿಭಟನಕಾರರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.