ADVERTISEMENT

ಪಾಕಿಸ್ತಾನದ ಅಣತಿಯಂತೆ ಉಗ್ರರ ದಾಳಿ: ತಪ್ಪೊಪ್ಪಿದ ಮುಷರಫ್‌

ಪಿಟಿಐ
Published 8 ಮಾರ್ಚ್ 2019, 5:07 IST
Last Updated 8 ಮಾರ್ಚ್ 2019, 5:07 IST
   

ಇಸ್ಲಾಮಾಬಾದ್‌:ಮಸೂದ್‌ ಅಜರ್‌ ನೇತೃತ್ವದ ಜೈಷ್‌ ಎ ಮೊಹಮ್ಮದ್‌ (ಜೆಇಎಂ) ಸಂಘಟನೆಯು ಪಾಕಿಸ್ತಾನ ಸರ್ಕಾರದ ಆಣತಿಯಂತೆಯೇ ಭಾರತದ ಮೇಲೆ ದಾಳಿ ನಡೆಸುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಒಪ್ಪಿಕೊಂಡಿದ್ದಾರೆ. ತಮ್ಮ ಆಳ್ವಿಕೆಯ ಅವಧಿಯಲ್ಲಿ ಗುಪ್ತಚರ ಸಂಸ್ಥೆಯ ನಿರ್ದೇಶನದಂತೆ ಭಾರತದ ಮೇಲೆ ಜೆಇಎಂ ಹಲವು ದಾಳಿಗಳನ್ನು ನಡೆಸಿತ್ತು ಎಂದು ಅವರು ಹೇಳಿದ್ದಾರೆ.

ಆದರೆ, ಜೆಇಎಂ ವಿರುದ್ಧ ಪಾಕಿಸ್ತಾನ ಸರ್ಕಾರ ಈಗ ಕೈಗೊಳ್ಳುತ್ತಿರುವ ಕ್ರಮವನ್ನು ಅವರು ಸ್ವಾಗತಿಸಿದ್ದಾರೆ. ಮುಷರಫ್‌ ಅವರ ಹತ್ಯೆಗೆ ಈ ಸಂಘಟನೆ ಎರಡು ಬಾರಿ ಶ್ರಮಿಸಿತ್ತು.

ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನದ ಮೇಲೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚಾಗಿದೆ. ಹಾಗಾಗಿ, ನಿಷೇಧಿತ ಉಗ್ರಗಾಮಿ ಸಂಘಟನೆಗಳ 44 ಸದಸ್ಯರನ್ನು ಪಾಕಿಸ್ತಾನ ಇತ್ತೀಚೆಗೆ ಬಂಧಿಸಿದೆ. ಅವರಲ್ಲಿ ಮಸೂದ್‌ ಅಜರ್‌ನ ಮಗ ಮತ್ತು ಸಹೋದರ ಸೇರಿದ್ದಾರೆ.

ADVERTISEMENT

1999ರಿಂದ 2008ರವರೆಗೆ ಮುಷರಫ್‌ ಅವರು ಪಾಕಿಸ್ತಾನವನ್ನು ಆಳಿದ್ದರು. 2016ರ ಮಾರ್ಚ್‌ನಿಂದ ಅವರು ದುಬೈಯಲ್ಲಿ ನೆಲೆಸಿದ್ದಾರೆ. 2007ರಲ್ಲಿ ಸಂವಿಧಾನವನ್ನು ಅಮಾನತಿನಲ್ಲಿ ಇರಿಸಿದ್ದಕ್ಕಾಗಿ ಅವರ ಮೇಲೆ ದೇಶದ್ರೋಹದ ಪ್ರಕರಣ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.