ADVERTISEMENT

ಬಾಲಾಕೋಟ್‌ಗೆ ಭಾರತೀಯ ಪತ್ರಕರ್ತರನ್ನು ಕರೆದೊಯ್ಯಲು ಸಿದ್ಧ: ಪಾಕ್‌

ಏಜೆನ್ಸೀಸ್
Published 30 ಏಪ್ರಿಲ್ 2019, 11:21 IST
Last Updated 30 ಏಪ್ರಿಲ್ 2019, 11:21 IST
ಮೆಜರ್‌ ಜನರಲ್ ಆಸಿಫ್‌ ಗಫೂರ್‌
ಮೆಜರ್‌ ಜನರಲ್ ಆಸಿಫ್‌ ಗಫೂರ್‌    

ಇಸ್ಲಾಮಾಬಾದ್: ಭಾರತೀಯ ಸೇನೆ ಬಾಲಾಕೋಟ್‌ನಲ್ಲಿ ನಡೆಸಿದ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರನ್ನು ಕರೆದೊಯ್ಯಲು ಸಿದ್ಧ ಎಂದು ಪಾಕಿಸ್ತಾನ ಹೇಳಿದೆ.

ಕಳೆದ ಫೆಬ್ರವರಿಯಲ್ಲಿಭಾರತೀಯ ಸೇನೆ ಬಾಲಕೋಟ್‌ನಲ್ಲಿ ನಡೆಸಿದ ವಾಯು ದಾಳಿಯಲ್ಲಿಉಗ್ರರು ಸತ್ತಿಲ್ಲ ಹಾಗೂ ಯಾವುದೇ ರೀತಿಯಹಾನಿಯಾಗಿಲ್ಲ ಎಂದು ಪಾಕಿಸ್ತಾನ ಪ್ರತಿಪಾದಿಸುತ್ತಿರುವ ಬೆನ್ನಲ್ಲೇದಾಳಿಯ ಪ್ರದೇಶಕ್ಕೆ ಭಾರತೀಯ ಪತ್ರಕರ್ತರನ್ನು ಕರೆದುಕೊಂಡು ಹೋಗಲು ಸಿದ್ಧ ಎಂದುಹೇಳಿದೆ.

ರಾವಲ್ಪಿಂಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿಮಾತನಾಡಿರುವ ಪಾಕಿಸ್ತಾನ ಸೇನೆಯ ವಕ್ತಾರರಾದ ಮೇಜರ್‌ ಜನರಲ್ ಆಸಿಫ್‌ ಗಫೂರ್‌ ಘಟನೆಯಸ್ಥಳಕ್ಕೆ ಭಾರತೀಯ ಪತ್ರಕರ್ತರು ಭೇಟಿ ನೀಡಲಿಆಗ ಸತ್ಯ ಏನು ಎಂಬುದು ಗೊತ್ತಾಗುತ್ತದೆಎಂದು ಅವರು ಹೇಳಿದ್ದಾರೆ.

ADVERTISEMENT

ಫುಲ್ವಾಮಾ ದಾಳಿಯಲ್ಲಿ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯ ಕೈವಾಡವಿರುವುದಾಗಿ ಭಾರತ ಹೇಳಿತ್ತು. ಬಾಲಾಕೋಟ್‌ನಲ್ಲಿಜೈಷ್‌–ಎ–ಮೊಹಮ್ಮದ್‌ ಉಗ್ರರ ನೆಲೆಗಳನ್ನು ಧ್ವಂಸ ಮಾಡಿ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಭಾರತ ಸುಳ್ಳು ಹೇಳಿದೆ, ಆದರೆ ಭಾರತ ನಡೆಸಿದ ವಾಯು ದಾಳಿಯಲ್ಲಿಉಗ್ರರು ಸತ್ತಿಲ್ಲ ಹಾಗೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪಾಕಿಸ್ತಾನ ಪ್ರತಿಪಾದಿಸಿದೆ.

ಈ ವಿಚಾರದಲ್ಲಿ ಭಾರತ ಪದೇ ಪದೇ ಸುಳ್ಳು ಹೇಳುತ್ತಿದೆ, ಒಂದು ಜವಾಬ್ದಾರಿಯುತ ದೇಶವಾಗಿರುವ ಭಾರತ ಕಳೆದ ಎರಡು ತಿಂಗಳಲ್ಲಿ ಲೆಕ್ಕವಿಲ್ಲದಷ್ಟು ಸುಳ್ಳು ಹೇಳಿದೆ, ಇದಕ್ಕೆ ಪಾಕಿಸ್ತಾನ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.