ADVERTISEMENT

ಸಂಕಷ್ಟದಲ್ಲಿರುವ ದೇಶಗಳಿಗೆ ತುರ್ತು ನೆರವು ನೀಡುವಂತೆ ಪಾಕಿಸ್ತಾನ ಸಚಿವ ಆಗ್ರಹ

ಐಎಎನ್ಎಸ್
Published 24 ಸೆಪ್ಟೆಂಬರ್ 2022, 2:01 IST
Last Updated 24 ಸೆಪ್ಟೆಂಬರ್ 2022, 2:01 IST
   

ವಿಶ್ವಸಂಸ್ಥೆ: ವಿವಿಧ ರೀತಿಯ ಸಂಕಷ್ಟಗಳಿಂದ ತತ್ತರಿಸಿರುವ 50ಕ್ಕೂ ಹೆಚ್ಚು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತುರ್ತು ನೆರವು ನೀಡಬೇಕಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಾಲ ಭುಟ್ಟೋ ಜರ್ದಾರಿ ಕರೆ ನೀಡಿದ್ದಾರೆ.

‌'ನಮ್ಮ ರಾಷ್ಟ್ರಗಳು ಹಾಗೂ ಜನರು ತುಂಬಾ ದೊಡ್ಡ ಸವಾಲುಗಳನ್ನು ಎದುರಿಸುತ್ತಿದ್ದಾರೆ. ನಾವು ಅಸಮಾನತೆ ಮತ್ತು ಬಡತನವನ್ನು ಶಾಶ್ವತವಾಗಿ ನೆಲೆಗೊಳ್ಳುವಂತೆ ಮಾಡುವ ನೀತಿಗಳನ್ನು ಬದಲಿಸಬೇಕಿದೆ' ಎಂದು ಜಿ–77 ಮತ್ತು ಚೀನಾ ಸಚಿವರ ಸಭೆಯಲ್ಲಿ ಹೇಳಿದ್ದಾರೆ.

ಜಗತ್ತು ಒಂದಕ್ಕೊಂದು ಬೆಸೆದುಕೊಂಡಿರುವ ಆಹಾರ, ಇಂಧನ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದಿರುವ ಅವರು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವು ನೀಡುವಂತೆ ಕರೆ ನೀಡಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ರಾಷ್ಟ್ರಗಳ ಆರ್ಥಿಕತೆ ಪುನಶ್ಚೇತನಕ್ಕೆ ₹ 40 ಲಕ್ಷ ಕೋಟಿ (500 ಬಿಲಿಯನ್ ಡಾಲರ್) ನೆರವು ನೀಡುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅವರ ಪ್ರಸ್ತಾವನೆಯನ್ನು ಜರ್ದಾರಿ ಸ್ವಾಗತಿಸಿದ್ದಾರೆ. ಹಾಗೆಯೇ,ಆಹಾರ ಸಮಸ್ಯೆ ಎದುರಿಸುತ್ತಿರುವ ಸುಮಾರು 25 ಕೋಟಿ ಜನರಿಗೆ ತುರ್ತು ಆಹಾರ ಸರಬರಾಜು ಮಾಡುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.