ADVERTISEMENT

ಶ್ರೀಲಂಕಾ: ಗುಂಡು ಹಾರಿಸಿ ಪ್ರತಿಭಟನಕಾರನ ಕೊಲೆ, ಬಳಿಕ ಆತ್ಮಹತ್ಯೆಗೆ ಶರಣಾದ ಸಂಸದ

ಏಜೆನ್ಸೀಸ್
Published 9 ಮೇ 2022, 13:20 IST
Last Updated 9 ಮೇ 2022, 13:20 IST
ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ನಿವಾಸದ ಎದುರು ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ನೂಕು-ನುಗ್ಗಲು ಏರ್ಪಟ್ಟಿರುವುದು.                                                                                                            -ಚಿತ್ರ ಎಎಫ್‌ಪಿ
ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ನಿವಾಸದ ಎದುರು ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ನೂಕು-ನುಗ್ಗಲು ಏರ್ಪಟ್ಟಿರುವುದು.                                                                                                            -ಚಿತ್ರ ಎಎಫ್‌ಪಿ   

ಕೊಲಂಬೊ(ಎಎಫ್‌ಪಿ): ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ಆಡಳಿತಾರೂಢ ಸಂಸದರೊಬ್ಬರು ಸರ್ಕಾರಿ ವಿರೋಧಿ ಪ್ರತಿಭಟನಕಾರರೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಅಲ್ಲದೆ, ಈ ವೇಳೆ ಪ್ರತಿಭಟನಕಾರರಿಂದ ಸುತ್ತುವರಿಯಲ್ಪಟ್ಟ ಅವರು, ತಮಗೆ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ನಿಟ್ಟಂಬುವಾ ಎಂಬ ಪಟ್ಟಣದಲ್ಲಿ ಕಾರಿನಲ್ಲಿ ಹೊರಟಿದ್ದ ಸಂಸದ ಅಮರಕೀರ್ತಿ ಅತುಕೊರಲಾ ಅವರನ್ನು ಪ್ರತಿಭಟನಕಾರರು ತಡೆದರು. ಈ ವೇಳೆ ಕಾರಿನಿಂದ ಇಳಿದ ಅವರು, ಕಾರಿಗೆ ಅಡ್ಡಗಟ್ಟಿದ್ದ ಇಬ್ಬರ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಸಮೀಪದ ಕಟ್ಟಡವೊಂದಕ್ಕೆ ತೆರಳಿ ಅವಿತುಕೊಂಡಿದ್ದರು. ಆಗ ಸಾವಿರಾರು ಪ್ರತಿಭಟನಕಾರರು ಕಟ್ಟಡವನ್ನು ಸುತ್ತುವರಿದರು. ಈ ವೇಳೆ ಸಂಸದರು ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ರಾಜಪಕ್ಸ ಬೆಂಬಲಿಗರು ನಡೆಸಿದ ದೌರ್ಜನ್ಯ ಮತ್ತು ಹಲ್ಲೆ ಘಟನೆಗಳನ್ನು ವಿರೋಧಿಸಿ ಸೋಮವಾರ ದೇಶದಾದ್ಯಂತ ಕರ್ಫ್ಯೂ ಆದೇಶದ ನಡುವೆಯೇ ಸಾವಿರಾರು ಮಂದಿ ಬೀದಿಗಿಳಿದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.