ನ್ಯೂಯಾರ್ಕ್ : ‘ದುಷ್ಕರ್ಮಿಯಿಂದ ದಾಳಿಗೆ ಒಳಗಾಗಿದ್ದ ಲೇಖಕ ಸಲ್ಮಾನ್ ರಶ್ದಿ ಅವರು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಅವರ ಒಂದು ಕೈ ಅಶಕ್ತವಾಗಿದೆ’ ಎಂದು ರಶ್ದಿ ಅವರ ಏಜೆಂಟ್ ಆ್ಯಂಡ್ರ್ಯೂ ವೈಲಿ ಭಾನುವಾರ ಹೇಳಿದ್ದಾರೆ.
‘ಚಾಕು ಇರಿತದಿಂದಾಗಿ ರಶ್ದಿ ಅವರ ಕುತ್ತಿಗೆ ಬಳಿ ಮೂರು ಗಂಭೀರ ಗಾಯಗಳಾಗಿವೆ. ಎದೆ ಭಾಗದಲ್ಲೂ ಗಾಯಗಳಾಗಿವೆ. ತೋಳಿನ ನರ ಕತ್ತರಿಸಿರುವುದರಿಂದ ಅವರ ಒಂದು ಕೈ ಸ್ವಾಧೀನ ಕಳೆದುಕೊಂಡಿದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.