ಕೊಲಂಬೊ: ಶ್ರೀಲಂಕಾದಲ್ಲಿ ಸೋಮವಾರ ಸರ್ಕಾರದ ಪರ ಮತ್ತು ವಿರೋಧಿ ಹಿಂಸಾಚಾರ ಪ್ರತಿಭಟನೆಗಳಲ್ಲಿ ಆಡಳಿತಾರೂಢ ಸಂಸದ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಸುಮಾರು 200 ಮಂದಿ ಗಾಯಗೊಂಡಿದ್ದು 181 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲನ್ನರುವಾ ಜಿಲ್ಲೆಯವೀರಕೇತಿಯಾ ಪಟ್ಟಣದಲ್ಲಿ ಸೋಮವಾರ ಸರ್ಕಾರಿ ವಿರೋಧಿ ಗುಂಪುಗಳು
ಕಾರಿನಲ್ಲಿ ತೆರಳುತ್ತಿದ್ದ ಎಸ್ಎಲ್ಪಿಪಿ ಸಂಸದ ಅಮರಕೀರ್ತಿ ಅತುಲಕೊರಲಾ(57) ಅವರ ಕಾರನ್ನು ಸುತ್ತುವರಿದವು. ಈ ವೇಳೆ ಎಸ್ಯುವಿ ಕಾರಿನಿಂದ ಗುಂಡು ಹಾರಿದ ಸದ್ದು ಕೇಳಿತು. ಆಕ್ರೋಶಗೊಂಡ ಪ್ರತಿಭಟನಕಾರರು ಕಾರನ್ನು ಪಲ್ಟಿ ಮಾಡಿದರು.ಕಾರಿನಿಂದ ತಪ್ಪಿಸಿಕೊಂಡ ಸಂಸದ ಸಮೀಪದ ಕಟ್ಟಡವೊಂದಕ್ಕೆ ತೆರಳಿ ಅವಿತುಕೊಂಡಿದ್ದರು. ಸಾವಿರಾರು ಪ್ರತಿಭಟನಕಾರರು ಕಟ್ಟಡವನ್ನು ಸುತ್ತುವರಿದಾಗ ಸಂಸದ ಇಬ್ಬರ ಮೇಲೆ ಗುಂಡು ಹಾರಿಸಿದರು. ಈ ವೇಳೆ 27 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಬಳಿಕ ಸಂಸದರು ತಾವೇ ಗುಂಡು ಹಾರಿಸಿಕೊಂಡಿದ್ದಾರೆ.
ಇದೇ ವೇಳೆ ಆಡಳಿತ ಪಕ್ಷದ ರಾಜಕಾರಣಿಯೊಬ್ಬರು ಸರ್ಕಾರದ ವಿರೋಧ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.