ವಾಷಿಂಗ್ಟನ್: ಪಾಕಿಸ್ತಾನವು ಉಗ್ರ ಸಂಘಟನೆಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವುದು ತುರ್ತು ಅಗತ್ಯವಾಗಿದೆ. ತನ್ನ ನಿಯಂತ್ರಣದಲ್ಲಿರುವ ಯಾವ ಪ್ರದೇಶವೂ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಕೆ ಆಗದಂತೆ ಆ ದೇಶ ನೋಡಿಕೊಳ್ಳಬೇಕು ಎಂದು ಭಾರತ– ಅಮೆರಿಕದ ಜಂಟಿ ಹೇಳಿಕೆ ಒತ್ತಾಯಿಸಿದೆ.
ಮುಂಬೈ ದಾಳಿ ಮತ್ತು ಪಠಾನ್ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ಸಂಚುಕೋರರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದೂ ಹೇಳಿಕೆ ಆಗ್ರಹಿಸಿದೆ.
ವಿಡಿಯೊ ಸಂಭಾಷಣೆ ಮೂಲಕ ನಡೆದ ಭಾರತ– ಅಮೆರಿಕ ಭಯೋತ್ಪದನಾ ತಡೆ ಜಂಟಿ ಕಾರ್ಯ ತಂಡದ 17ನೇ ಸಭೆಯ ಬಳಿಕ ಈ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಭಯೋತ್ಪಾದನಾ ನಿಗ್ರಹ ಘಟಕದ ಜಂಟಿ ಕಾರ್ಯದರ್ಶಿ ಮಹಾವೀರ್ ಸಿಂಘ್ವಿ ಭಾರತದ ನಿಯೋಗದ ನೇತೃತ್ವ ವಹಿಸಿದ್ದರು. ಅಮೆರಿಕದ ಪರವಾಗಿ ಭಯೋತ್ಪಾದನಾ ತಡೆ ಘಟಕದ ರಾಜ್ಯ ವಿಭಾಗದ ಸಮನ್ವಯಾಧಿಕಾರಿ ನಥಾನ್ ಸೇಲ್ಸ್ ಪಾಲ್ಗೊಂಡಿದ್ದರು.
ಭಯೋತ್ಪಾದನಾ ಚಟುವಟಿಕೆ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರಕ್ಕೆ ಬೆಂಬಳ ನೀಡುವುದಾಗಿ ಅಮೆರಿಕ ಪುನರುಚ್ಚರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.