ADVERTISEMENT

ಅರಣ್ಯರೋದನಕ್ಕೆ ಕೊನೆಯಿಲ್ಲವೆ?

ವಿಜಯ್ ರಾಂಪುರ, ಚನ್ನಪಟ್ಟಣ
Published 11 ನವೆಂಬರ್ 2014, 19:30 IST
Last Updated 11 ನವೆಂಬರ್ 2014, 19:30 IST

ವನ್ಯ ಮೃಗಗಳಾದ ಚಿರತೆ ಮತ್ತು ಆನೆಗಳ ಸಂತತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿರುವುದು ಒಂದು ಕಡೆ ಸಂತಸದ ಸಂಗತಿ. ಆದರೆ, ಇನ್ನೊಂದು ಕಡೆ ಆಹಾರ ಅರಸಿ ಗ್ರಾಮಗಳತ್ತ ಬರುತ್ತಿರುವ ಈ ಪ್ರಾಣಿಗಳು ರಸ್ತೆ ಅಪಘಾತ, ವಿಷಪ್ರಾಶನ, ವಿದ್ಯುತ್ ಅಪಘಾತ, ಬೇಟೆ ಇತ್ಯಾದಿಗಳಿಗೆ ತುತ್ತಾಗಿ, ಅಸಹಜ ಸಾವನ್ನಪ್ಪುತ್ತಿರುವುದು ಕಳವಳಕಾರಿ.

ಒಂದೆಡೆ ಕಾಡು ಪ್ರಾಣಿಗಳ ಸಾವು, ಮತ್ತೊಂದೆಡೆ ಇವುಗಳ ದಾಳಿಯಿಂದ ರೈತರ ಆಸ್ತಿ-ಪಾಸ್ತಿ ನಷ್ಟ ಹಾಗೂ ಜನ-ಜಾನುವಾರುಗಳಿಗೆ ರಕ್ಷಣೆ ಇಲ್ಲದಿರು­ವುದು ಎರಡೂ ಆತಂಕದ ವಿದ್ಯಮಾನಗಳು. ಇಷ್ಟೆಲ್ಲಾ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇದು ವಿಷಾದನೀಯ.    
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.