
ಪ್ರಜಾವಾಣಿ ವಾರ್ತೆಗುರುವಾರ, 8-3-1962
ನಾಯಕತ್ವ ಆಯ್ಕೆ ಬಗ್ಗೆಶ್ರೀ ಶಾಸ್ತ್ರಿ ಪ್ರಯತ್ನ
ಬೆಂಗಳೂರು, ಮಾ. 7 - ವಿಧಾನ ಮಂಡಲ ಕಾಂಗ್ರೆಸ್ ಪಕ್ಷದ ನಾಯಕನ ಆಯ್ಕೆ ಸರ್ವಾನುಮತದಿಂದ ನಡೆಯಲು ಇಂದು ಯತ್ನಿಸಿದ ಹೈಕಮಾಂಡಿನ ಪ್ರತಿನಿಧಿ ಸಚಿವ ಶ್ರೀ ಲಾಲ್ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಪ್ರಯತ್ನದಲ್ಲಿ ಶೇಕಡ 50 ರಷ್ಟು ಪ್ರಗತಿ ಸಾಧಿಸಿರುವುದಾಗಿ ಮಧ್ಯರಾತ್ರಿ ವರದಿಗಾರರಿಗೆ ತಿಳಿಸಿದರು.
ಪಾರ್ಲಿಮೆಂಟಿನಲ್ಲಿ ಕಾಂಗ್ರೆಸ್ಪಕ್ಷದ ನಾಯಕತ್ವ
ನವದೆಹಲಿ, ಮಾ. 7 - ದ್ವಿತೀಯ ಲೋಕ ಸಭೆಯ ಕೊನೆಯ ಅಧಿವೇಶನಕ್ಕೆ ಮೊದಲು, ಮಾರ್ಚ್ 11 ರಂದು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷವು ಇಲ್ಲಿ ಸಭೆ ಸೇರಲಿದೆ.
ಪಕ್ಷವನ್ನುದ್ದೇಶಿಸಿ ಮಾತನಾಡುವ ಪ್ರಧಾನ ಮಂತ್ರಿ ನೆಹರೂ ಅವರು, ಸಾರ್ವತ್ರಿಕ ಚುನಾವಣೆ ಹಾಗೂ ಅಂತರರಾಷ್ಟ್ರೀಯ ಪರಿಸ್ಥಿತಿಯನ್ನು ಪ್ರಸ್ತಾಪಿಸುವರೆಂದು ನಿರೀಕ್ಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.