ADVERTISEMENT

ಬುಧವಾರ, 12-12-1962

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಚೀಣಾ ಮತ್ತೆ ದಾಳಿ ಮಾಡಿದರೆ ಹಿಮ್ಮೆಟ್ಟಿಸುವುದು ಖಚಿತ
ನವದೆಹಲಿ, ಡಿ. 11 -
`ಚೀಣಾದ ಬೆದರಿಕೆಗಳಿಗೆ ಭಾರತವು ಜಗ್ಗುವುದಿಲ್ಲ. ಹೊಸ ದಾಳಿ ಏನಾದರೂ ನಡೆದರೆ ಚೀಣೀಯರನ್ನು ಯಶಸ್ವಿಯಗಿ ಹಿಂದಕ್ಕಟ್ಟುತ್ತೇವೆ' ಎಂದು ಪ್ರಧಾನ ಮಂತ್ರಿ ನೆಹರೂರವರು ನಿನ್ನೆ ಘೋಷಿಸಿದರು.

`ಕಡು ಬಡವ'
ದೆಹಲಿ, ಡಿ. 11 -
ತಮ್ಮ 50 ಲಕ್ಷ ರೂಪಾಯಿ ವಾರ್ಷಿಕ ರಾಜಧನದಲ್ಲಿ ರಾಷ್ಟ್ರೀಯ ರಕ್ಷಣಾ ನಿಧಿಗೆ ತಾವು ಕಾಣಿಕೆ ನೀಡಲು `ನಾನು ಕಡು ಬಡವ' ಎಂಬುದಾಗಿ ಹೈದರಾಬಾದಿನ ನಿಜಾಮರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಎಲ್ಲ ಮಾಜಿ ರಾಜ ಮಹಾರಾಜರೂ ತಮ್ಮ ರಾಜಧನದಲ್ಲಿ ಶೇಕಡ 10 ರಷ್ಟನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ಕೊಡ ಬೇಕೆಂದು ಕೇಂದ್ರ ಸರ್ಕಾರ ಪ್ರಾರ್ಥಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.