ದೆಹಲಿ, ಡಿ. 8– ಬೆಲ್ಗ್ರೇಡ್ನಲ್ಲಿ ಸಮಾ ವೇಶಗೊಂಡಿದ್ದ ರೀತಿಯ ಇನ್ನೊಂದು ತಟಸ್ಥ ರಾಷ್ಟ್ರಗಳ ಸಮ್ಮೇಳನ ಸಮಾ ವೇಶಗೊಳ್ಳಬೇಕೆಂದು ಸಿಂಹಳ ಪ್ರಧಾನ ಮಂತ್ರಿ ಶ್ರೀಮತಿ ಸಿರಿಮಾವೋ ಬಂಡಾರ ನಾಯಕೆ ಮತ್ತು ಸಂಯುಕ್ತ ಅರಬ್ ಗಣ ರಾಜ್ಯದ ಅಧ್ಯಕ್ಷ ನಾಸೆರರ ಸಲಹೆ ಯನ್ನು ಅನುಮೋದಿಸಿ ಪ್ರಧಾನ ಮಂತ್ರಿ ದ್ವಯರಿಗೂ ಭಾರತದ ಪ್ರಧಾನಮಂತ್ರಿ ನೆಹರೂರವರು ಪತ್ರ ಬರೆದಿರುವುದಾಗಿ ತಿಳಿದುಬಂದಿದೆ.
ಏರೋಡ್ರೋಂನಲ್ಲಿ 1000 ತೊಲ ಚಿನ್ನ ಪತ್ತೆ
ಬೆಂಗಳೂರು, ಡಿ. 8– ಮುಂಬೈನಿಂದ ವಿಮಾನದಲ್ಲಿ ನಗರಕ್ಕೆ ಆಗಮಿಸಿದ ಶ್ರೀ ಎ.ಎಸ್. ಕೆ. ಚೌಧರಿ ಎಂಬ ಪ್ರಯಾಣಿಕ ನಿಂದ ಕೇಂದ್ರ ಎಕ್ಸೈಸ್ ಅಧಿಕಾರಿಗಳು ಸುಮಾರು 125000 ರೂಪಾಯಿ ಬೆಲೆ ಬಾಳುವ 1000 ತೊಲ ಚಿನ್ನವನ್ನು ವಿಮಾನ ನಿಲ್ದಾಣದಲ್ಲಿ ವಶಪಡಿಸಿ ಕೊಂಡರು. ಪ್ರಯಾಣಿಕ ಧರಿಸಿದ್ದ ಬಿಳಿ ಡಿಲ್ ಜಾಕೆಟ್ನಲ್ಲಿ ಚಿನ್ನವನ್ನು ಬಚ್ಚಿಡಲಾಗಿತ್ತು. ತನಿಖೆ ನಡೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.