ರಾಜ್ಯ ನಗರಗಳ ಸೌಲಭ್ಯಕ್ಕೆ ನೆರವು: ಉದ್ಯಮಗಳಿಗೆ ಮೊರೆ
ಬೆಂಗಳೂರು, ಜ. 23– ಬೆಂಗಳೂರಿನ ಹಾಗೂ ರಾಜ್ಯದ ಇತರ ಪ್ರಮುಖ ನಗರಗಳ ರಸ್ತೆ, ವಿದ್ಯುತ್, ನೀರು ಪೂರೈಕೆ ಹಾಗೂ ಇತರ ಮೂಲಸೌಲಭ್ಯಗಳ ಅಭಿವೃದ್ಧಿಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿಜೆ.ಎಚ್. ಪಟೇಲ್ ಅವರು ಅಂತರರಾಷ್ಟ್ರೀಯ ಕೈಗಾರಿಕಾ ಕೂಟಗಳಿಗೆ ಮನವಿ ಮಾಡಿದರು.
ಇಲ್ಲಿಗೆ ಸಮೀಪದ ವೈಟ್ಫೀಲ್ಡ್ನಲ್ಲಿ ಟಾಟಾ ಉದ್ಯಮ ಸಮೂಹ ಹಾಗೂ ಸಿಂಗ ಪುರ ಉದ್ಯಮಗಳ ಕೂಟವು ನಿರ್ಮಿಸುತ್ತಿ ರುವ ಅಂತರರಾಷ್ಟ್ರೀಯ ತಂತ್ರಜ್ಞಾನ ಸಂಕೀರ್ಣದ (ಐಟಿಪಿಎಲ್) ಮೊದಲ ಹಂತವು 1995ರ ಸೆಪ್ಟೆಂಬರ್ನಲ್ಲಿ ಆರಂಭ ಗೊಂಡು, ‘ನಿಗದಿತ ಅವಧಿಗಿಂತಲೂ ಮೊದಲೇ ಪೂರ್ತಿಗೊಳ್ಳುತ್ತಿರುವುದು ನಮ್ಮ ಅಧಿಕಾರಿಗಳ ಸಮೂಹಕ್ಕೆ ‘ಕಣ್ಣು ತೆರೆಸುವ’ ವಿಷಯವಾಗಿದೆ’ ಎಂದು ಪಟೇಲ್ ಹೇಳಿದರು.
‘ಯೋಜನೆಗಳನ್ನು ಸಕಾಲದಲ್ಲಿ ಪೂರ್ತಿಗೊಳಿಸಬೇಕು. ಈ ಮೂಲಕ ವೆಚ್ಚ ಏರಿಕೆಯನ್ನು ತಡೆಯಬಹುದು ಎಂಬ ಪಾಠ ನಮ್ಮ ಅಧಿಕಾರಿಗಳಿಗೆ ಈ ಯೋಜನೆಯಲ್ಲಿ ಅಡಗಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.