
ಪ್ರಜಾವಾಣಿ ವಾರ್ತೆ
ಬೆಂಗಳೂರು, ಫೆ.14– ಉಜನಿ ಅಣೆಕಟ್ಟೆಯಿಂದ ಮಹಾರಾಷ್ಟ್ರ ಸರ್ಕಾರವು ಬಿಟ್ಟಿರುವ 1.5 ಟಿಎಂಸಿ ನೀರು ನಾಳೆ ಕರ್ನಾಟಕವನ್ನು ತಲುಪಲಿದೆ ಎಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಇಲ್ಲಿ ತಿಳಿಸಿದರು.
ತಮ್ಮ ಬೆಳಗಿನ ಸಾರ್ವಜನಿಕ ಭೇಟಿ ಕಾರ್ಯಕ್ರಮದ ನಂತರ ವರದಿಗಾರರ ಜತೆಗೆ ಮಾತನಾಡಿದ ಅವರು, ನದಿಯಲ್ಲಿ ನೀರು ನಿಧಾನವಾಗಿ ಬರುತ್ತಿದೆ ಎಂದರು. ಭೀಮಾ ನದಿ ನೀರಿಗೆ ಒತ್ತಾಯಿಸಿ ನಿರಶನ ನಡೆಸುತ್ತಿರುವ ರೈತರೊಂದಿಗೆ ವಿಜಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ
ಎಸ್.ಆರ್.ಕಾಶಪ್ಪನವರ್ ಸಂಧಾನ ನಡೆಸುತ್ತಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.