ADVERTISEMENT

25 ವರ್ಷಗಳ ಹಿಂದೆ ಶುಕ್ರವಾರ 05.07.1996

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 19:31 IST
Last Updated 4 ಜುಲೈ 2021, 19:31 IST
   

ಶಾಸಕರಿಗೆ ಹೆಗಡೆ ಕಿವಿಮಾತು
ವಿಜಾಪುರ, ಜುಲೈ 4– ‘ಖಾಲಿ ಹಾಳೆಗಳ ಮೇಲೆ ಸಹಿ ಹಾಕಬೇಡಿ’– ಜನತಾದಳದ ಉಚ್ಚಾಟಿತ ನಾಯಕ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಜನತಾದಳದ ಶಾಸಕರಿಗೆ ಹೇಳಿದ ಕಿವಿಮಾತು ಇದು.

‘ಜೆ.ಎಚ್.ಪಟೇಲರ ನೇತೃತ್ವದ ಸರ್ಕಾರ ಅಭದ್ರವಾಗಿದೆ ಎಂಬ ಭಯ ಬೇಡ. ಚುನಾವಣೆ ಸಮಯದಲ್ಲಿ ಜನರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಿ’ ಎಂದು ಶಾಸಕರಿಗೆ ಸಲಹೆ ಮಾಡಿದರು.

ಸಾರ್ವಜನಿಕ ವೇದಿಕೆಗಳಲ್ಲಿ ಶಾಸಕರನ್ನು ಟೀಕಿಸುತ್ತಿದ್ದೀರಿ, ಪಟೇಲರ ಸರ್ಕಾರಕ್ಕೆ ನಮ್ಮಿಂದ ಗಂಡಾಂತರವಿಲ್ಲ ಎಂದು ಹೇಳುತ್ತಿದ್ದೀರಿ, ಹಾಗಾದರೆ ಶಾಸಕರು ಏನು ಮಾಡಬೇಕು ಎಂಬ ಪತ್ರಕರ್ತರ ಪ್ರಶ್ನೆಗೆ ಹೆಗಡೆ ಹೀಗೆ ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.