ಸಿಇಟಿ ಸಂದರ್ಶನ ಮುಂದಕ್ಕೆ
ಬೆಂಗಳೂರು, ಆಗಸ್ಟ್ 29– ವೈದ್ಯಕೀಯ ಮತ್ತು ದಂತವೈದ್ಯ ಕಾಲೇಜುಗಳ ಪ್ರವೇಶಕ್ಕೆ ನಾಳೆಯಿಂದ ಪ್ರಾರಂಭವಾಗಬೇಕಿದ್ದ ಸಿಇಟಿ ಸಂದರ್ಶನವನ್ನು ಹೈಕೋರ್ಟ್ ಇಂದು ಎರಡು ವಾರಗಳ ಅವಧಿಗೆ ಮುಂದಕ್ಕೆ ಹಾಕಿತು.
ಈ ಕಾಲೇಜುಗಳ ಪ್ರವೇಶ ಸಂಖ್ಯೆ ಮತ್ತಿತರ ವಿಷಯಗಳ ಬಗ್ಗೆ ಅಂತಿಮವಾಗಿ ತೀರ್ಮಾನ ಕೈಗೊಳ್ಳಬೇಕಾಗಿರುವುದರಿಂದ ಮಧ್ಯೆ ಸಂದರ್ಶನ ನಡೆಸಿ ಪ್ರವೇಶಕ್ಕೆ ಅವಕಾಶ ಕೊಡುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಜಿ.ಸಿ.ಭರೂಕ ಅವರು ಸಂದರ್ಶನವನ್ನು ಎರಡು ವಾರ ಮುಂದೂಡಿದರು.
ಸುಖ್ರಾಂ ಹಗರಣ: ಸದನ ಸಮಿತಿಗೆ ಸಿಪಿಎಂ, ಬಿಜೆಪಿ ಆಗ್ರಹ
ನವದೆಹಲಿ, ಆಗಸ್ಟ್ 29 (ಪಿಟಿಐ, ಯುಎನ್ಐ)– ಮಾಜಿ ಸಂಪರ್ಕ ಸಚಿವ ಹಾಗೂ ಕಾಂಗ್ರೆಸ್ ನಾಯಕ ಸುಖ್ರಾಂ ವಿರುದ್ಧ ಇರುವ ಗಂಭೀರ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಜಂಟಿ ಸದನ ಸಮಿತಿ ರಚಿಸಬೇಕು ಎಂದು ಸಿಪಿಐ–ಎಂ ಹಾಗೂ ಭಾರತೀಯ ಜನತಾ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಇಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.