ಬಿಜೆಪಿ ಬೆಂಬಲ ವಾಪಾಸ್: ಮಾಯಾವತಿ ಸರ್ಕಾರ ಪತನ
ಲಖನೌ, ಅ.17 (ಪಿಟಿಐ, ಯುಎನ್ಐ): ಭಾರತೀಯ ಜನತಾ ಪಕ್ಷವು ಬೆಂಬಲ ವಾಪಾಸು ತೆಗೆದುಕೊಂಡ ಪರಿಣಾಮವಾಗಿ ಉತ್ತರ ಪ್ರದೇಶದ ಬಿಎಸ್ಪಿ ಪಕ್ಷದ ಮಾಯಾವತಿ ಸರ್ಕಾರ ಇಂದು ಪತನಗೊಂಡಿತು.
ಮುಖ್ಯಮಂತ್ರಿ ಮಾಯಾವತಿ ಇಂದು ರಾತ್ರಿ ರಾಜೀನಾಮೆಯನ್ನು ರಾಜ್ಯಪಾಲ ಮೋತಿಲಾಲ ವೋರಾ ಅವರಿಗೆ ಸಲ್ಲಿಸಿದರು. ಅವರು ರಾಜೀನಾಮೆ ಸಲ್ಲಿಸುವಂತೆ ಬಿಎಸ್ಪಿ ಅಧ್ಯಕ್ಷ ಕಾನ್ಶೀರಾಂ ಇದಕ್ಕೆ ಮುನ್ನ ಆದೇಶ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.