ADVERTISEMENT

ಬುಧವಾರ, 5–10–1994

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:00 IST
Last Updated 4 ಅಕ್ಟೋಬರ್ 2019, 20:00 IST

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 29 ಸಾವು

ಝಾನ್ಸಿ, ಅ. 4 (ಪಿಟಿಐ)– ಇಲ್ಲಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಇಂದು ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದಾಗ ಅದರಲ್ಲಿ ಕೆಲಸ ಮಾಡುತ್ತಿದ್ದ ಹಲವು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ 29 ಕಾರ್ಮಿಕರು ಸತ್ತರು.

ದಸರಾ: ಇನ್ನೂ ಅನಿಶ್ಚಿತ

ADVERTISEMENT

ಮೈಸೂರು, ಅ. 4– ಇನ್ನೊಂದು ದಿನ ಕಾದರೆ ವಿಶ್ವವಿಖ್ಯಾತ ಮೈಸೂರು ದಸರಾದ ತೆರೆ ಏಳಬೇಕಾಗಿದೆ. ಈ ತೆರೆ ಏಳುತ್ತದೆಯೇ ಇಲ್ಲವೇ ಎಂಬುದು ಈಗಲೂ ಅನಿಶ್ಚಿತವಾಗಿಯೇ ಉಳಿದು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಒಂದು ಕಡೆ ಪ್ಲೇಗ್ ಭೀತಿಯಿಂದ ಕಂಗಾಲಾಗಿರುವ ಮೈಸೂರು ನಗರದ ನಾಗರಿಕರು, ಇನ್ನೊಂದು ಕಡೆ ದಸರಾ ಕುರಿತಂತೆ ದಿನಕ್ಕೊಂದು ರೀತಿಯಲ್ಲಿ ಪ್ರಕಟವಾಗುತ್ತಿರುವ ಸರ್ಕಾರದ ನಿಲುವಿನಿಂದ ಗಾಬರಿಗೊಳ್ಳುತ್ತಿದ್ದಾರೆ.

ಮೈಸೂರು ನಗರದ ಸೋಂಕು ರೋಗ ಆಸ್ಪತ್ರೆಯಲ್ಲಿ ಪ್ಲೇಗ್ ರೋಗ ಶಂಕಿತ ಆರು ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರ ರಕ್ತದ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಕಳಿಸಿದ್ದರೂ ಫಲಿತಾಂಶ ಮಾತ್ರ ಪ್ರಕಟವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.