ಶಿರೂರು ಮಠಕ್ಕೆ ನೂತನ ಶ್ರೀಗಳು
ಉಡುಪಿ, ಜುಲೈ 2– ಉಡುಪಿ ಅಷ್ಟಮಠಗಳಿಗೆ ಸೇರಿದ ಶ್ರೀ ಶಿರೂರು ಮಠದ ಶ್ರೀ ಲಕ್ಷ್ಮೀಮನೋಜ್ಞ ತೀರ್ಥ ಶ್ರೀಪಾದಂ ಗಳವರು ತಮ್ಮ ಸನ್ಯಾಸಿ ಪಟ್ಟವನ್ನು ತೊರೆ ಯುವ ನಿರ್ಧಾರ ಮಾಡಿದುದರಿಂದ, ದ್ವಂದ್ವ ಮಠದ ಗುರುಗಳಾದ ವಿಶೋತ್ತಮ ತೀರ್ಥ ಶ್ರೀಪಾದಂಗಳವರು ಜುಲೈ 1ರಂದು ನೂತನ ವಟುವಿಗೆ ಶಿರೂರು ಮಠದ ಸನ್ಯಾಸದ ದೀಕ್ಷೆಯನ್ನಿತ್ತು ಮುಂದಿನ ಮಠಾಧಿಪತಿಗಳನ್ನಾಗಿ ನೇಮಿಸಿದರು.
ಕಾವೇರಿ ವಿವಾದ: ಪ್ರಧಾನಿ ಭೇಟಿ ಮಾಡಿದ ಸಂಸದರು
ನವದೆಹಲಿ, ಜುಲೈ 2– ಕಾವೇರಿ ಜಲವಿವಾದವನ್ನು ಪಂಚಾಯ್ತಿಗೆ ಒಪ್ಪಿಸ ಬೇಕೆಂಬ ತಮಿಳುನಾಡು ರಾಜ್ಯದ ಒತ್ತಾಯವನ್ನು ಪರಿಶೀಲಿಸುವುದಾಗಿ ಪ್ರಧಾನಿ ಇಂದಿರಾ ಗಾಂಧಿಯವರು ಇಂದು ರಾಜ್ಯದ ಸರ್ವಪಕ್ಷಗಳ ಸಂಸತ್ ಸದಸ್ಯರ ನಿಯೋಗವೊಂದಕ್ಕೆ ಆಶ್ವಾಸನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.