ADVERTISEMENT

50 ವರ್ಷಗಳ ಹಿಂದೆ | ಬುಧವಾರ, 1–7–1970

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 19:30 IST
Last Updated 30 ಜೂನ್ 2020, 19:30 IST

ಯು.ಪಿ ವಿಧಾನಸಭೆಯಲ್ಲಿ ಕೋಲಾಹಲ
ಲಖನೌ, ಜೂನ್‌ 30–
ಉತ್ತರಪ್ರದೇಶ ವಿಧಾನಸಭೆಯಲ್ಲಿ ಇಂದು ಸರ್ಕಾರಿ ನಿರ್ಣಯಕ್ಕೆ ಸೋಲು ಸಂಭವಿಸಿದ ನಂತರ ಮುಖ್ಯಮಂತ್ರಿ ಶ್ರೀ ಚರಣ್‌ಸಿಂಗ್‌ ಅವರು ಕೋರಿದ ವಿಶ್ವಾಸಮತ ದೊರೆತು, ನಿಶ್ಚಿತ ವೇಳೆಗಿಂತ 40 ನಿಮಿಷ ಮೊದಲೇ ಸಭೆ ಹಠಾತ್ತನೆ ಮುಕ್ತಾಯವಾಯಿತು.

ಸರ್ಕಾರಿ ನಿರ್ಣಯಕ್ಕೆ ಸೋಲಾದ ನಂತರ ಸಭೆಯನ್ನು ಮೊದಲು 15 ನಿಮಿಷಗಳ ಕಾಲ, ಅನಂತರ ಎರಡು ಗಂಟೆಗಳ ಕಾಲ, ಪುನಃ 15 ನಿಮಿಷಗಳ ಕಾಲ– ಹೀಗೆ ಮೂರು ಬಾರಿ ಮುಂದಕ್ಕೆ ಹಾಕಲಾಗಿತ್ತು.

ತಾವು ಜಾಟರೆಂದೂ ಮುಖ್ಯಮಂತ್ರಿಯ ಬಂಧುವೆಂದೂ ಜನರಿಗೆ ಹೇಳುತ್ತಾ ಬಹರೈಚ್‌ನ ಜಿಲ್ಲಾ ಸರಬರಾಜು ಅಧಿಕಾರಿ ಲಂಚ ತೆಗೆದುಕೊಂಡರೆಂದು ಪ್ರಶ್ನೆಯೊಂದರ ಸಮಯದಲ್ಲಿ ಎಸ್‌ಎಸ್‌ಪಿ ನಾಯಕ ಶ್ರೀ ಎ.ಕೆ.ಜೈಸ್ವಾಲ್‌ ಅವರು ಟೀಕಿಸಿದಾಗ ಸಭೆಯಲ್ಲಿ ಪ್ರಕ್ಷುಬ್ಧ ಸ್ಥಿತಿ ಪ್ರಾರಂಭವಾಯಿತು.

ADVERTISEMENT

ಕೃಷಿ ಸಂಶೋಧನಾ ಮಂಡಳಿ: ಶಾಸನಬದ್ಧ ಸ್ಥಾನಮಾನ
ನವದೆಹಲಿ, ಜೂನ್‌ 30–
ಭಾರತ ಕೃಷಿ ಸಂಶೋಧನಾ ಮಂಡಳಿಯನ್ನು ಶಾಸನಬದ್ಧ ಸಂಸ್ಥೆಯಾಗಿ ಪರಿವರ್ತಿಸಿ ಅದನ್ನು ರಾಷ್ಟ್ರೀಯ ಪ್ರಾಮುಖ್ಯದ ಸಂಸ್ಥೆಯೆಂದು ಘೋಷಿಸಲು ಕೇಂದ್ರ ಸಚಿವ ಸಂಪುಟ ಇಂದು ಇಲ್ಲಿ ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.