ADVERTISEMENT

50 ವರ್ಷಗಳ ಹಿಂದೆ ಭಾನುವಾರ 29–11–1970

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 20:16 IST
Last Updated 28 ನವೆಂಬರ್ 2020, 20:16 IST
   

ಗಡಿ ಪ್ರಶ್ನೆ: ಪ್ರಧಾನಿ ನಿರ್ಧಾರ ಇನ್ನೂ ಅನಿಶ್ಚಿತ
ನವದೆಹಲಿ, ನ. 28–ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಕುರಿತ ಮಹಾಜನ್ ಆಯೊಗದ ವರದಿ ಬಗ್ಗೆ ಪ್ರಧಾನಿ ಇಂದಿರಾ ಗಾಂಧಿಯವರು ಇನ್ನೂ ಯಾವ ನಿರ್ಧಾರಕ್ಕೂ ಬಂದಿಲ್ಲ ಎಂಬುದು ಅವರ ಜತೆ ಇಂದು ಸಂಜೆ ಇಪ್ಪತ್ತೈದು ನಿಮಿಷ ಮಾತುಕತೆ ನಡೆಸಿದ ಮೈಸೂರು ಮುಖ್ಯಮಂತ್ರಿ ಶ್ರೀವೀರೇಂದ್ರ ಪಾಟೀಲರ ಅಭಿಪ್ರಾಯ.

ಅಂತೆಯೇ ಕಾವೇರಿ ನೀರಿನ ಬಗ್ಗೆ ಮದರಾಸು ಜತೆ ಇರುವ ವಿವಾದದ ವಿಚಾರದಲ್ಲಿ ಪ್ರಧಾನಿ ಜತೆ ಅವರು ನಡೆಸಿದ ಚರ್ಚೆಗಳಲ್ಲಿ ಖಚಿತವಾದ ಫಲಿತಾಂಶ ಹೊರಬರಲಿಲ್ಲ.

ಕಪಿಲಾ, ಹೇಮಾವತಿ, ಹಾರಂಗಿ ಮತ್ತು ಸುವರ್ಣಮುಖಿ ಯೋಜನೆಗಳಿಗೆ ಕೇಂದ್ರವು ಶೀಘ್ರವಾಗಿ ಅನುಮತಿ ಕೊಡಬೇಕೆಂದು ಮುಖ್ಯಮಂತ್ರಿ ಮತ್ತೊಮ್ಮೆ ಒತ್ತಾಯ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.