ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, 19 ಜನವರಿ 1973

ಪ್ರಜಾವಾಣಿ ವಿಶೇಷ
Published 18 ಜನವರಿ 2023, 21:19 IST
Last Updated 18 ಜನವರಿ 2023, 21:19 IST
   

ಭದ್ರಾವತಿ ಕಾರ್ಖಾನೆ ಸ್ವರ್ಣೋತ್ಸವ ಆರಂಭ
ಭದ್ರಾವತಿ, ಜ. 18–
ಸ್ಥಳೀಯ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸುವರ್ಣ ಮಹೋತ್ಸವವು ಇಂದು ಬೆಳಿಗ್ಗೆ ಇಲ್ಲಿ ವಿಧ್ಯುಕ್ತವಾಗಿ ಆರಂಭವಾಯಿತು.

ಕಾರ್ಖಾನೆಯ ಎಲ್ಲ ಅಧಿಕಾರಿಗಳೂ ಮುಖ್ಯದ್ವಾರದ ಬಳಿ ನೆರೆದು, ಈಗ ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಉಕ್ಕಿನ ಕಾರ್ಯಾಗಾರವಾಗಿರುವ ಈ ಕಾರ್ಖಾನೆ ಈ ಮಟ್ಟ ಮುಟ್ಟಲು ತ್ಯಾಗ ಮಾಡಿದ ಎಲ್ಲರಿಗೂ ನಮನ ಸಲ್ಲಿಸಿದರು.

ರಾಷ್ಟ್ರಪತಿ ಆಳ್ವಿಕೆಯಲ್ಲಿ ಆಂಧ್ರ
ನವದೆಹಲಿ, ಜ. 18–
ಆಂಧ್ರ ಪ್ರದೇಶವು ಇಂದಿನಿಂದ ರಾಷ್ಟ್ರಪತಿ ಆಳ್ವಿಕೆಗೆ ಒಳಗಾಯಿತು. ಪ್ರತ್ಯೇಕತಾವಾದಿ ಚಳವಳಿಯಿಂದ ಕುಸಿದುಬಿದ್ದ ಕಾನೂನು, ಶಿಸ್ತು ಮತ್ತು ಶಾಂತಿ ಪರಿಸ್ಥಿತಿಯನ್ನು ಎದುರಿಸುವುದರಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದ್ದರಿಂದ ಈ ಕ್ರಮ ಅನಿವಾರ್ಯವಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.