ADVERTISEMENT

50 ವರ್ಷಗಳ ಹಿಂದೆ: ಸೋಮವಾರ, 2–4–1973

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 19:31 IST
Last Updated 1 ಏಪ್ರಿಲ್ 2023, 19:31 IST
   

ಹುಲಿ ರಕ್ಷಣೆಗೆ ಬೃಹತ್‌ ಯೋಜನೆ

ಕಾರ್ಬಟ್‌ ಉದ್ಯಾನ, ನೈನಿತಾಲ್‌, ಏ.1– ವ್ಯಾಘ್ರ ಸಂತಾನ ನಶಿಸಿಹೋಗುವುದನ್ನು ತಡೆಗಟ್ಟುವ 6 ವರ್ಷ ಕಾಲಾವಧಿಯ 4 ಕೋಟಿ ರೂಪಾಯಿ ಯೋಜನೆ ಯನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಸಾರಿಗೆ ಖಾತೆ ಸಚಿವ ಡಾ. ಕರಣ್‌ ಸಿಂಗ್‌ ಅವರು ಇಂದು ಇಲ್ಲಿ ಉದ್ಘಾಟಿಸಿದರು.

‘ಈಗಿನ ಪರಿಸ್ಥಿತಿ ಮುಂದುವರಿದರೆ ವನ್ಯಮೃಗ ಜೀವನದ ವಿಶ್ವ ಸಂಕೇತವಾಗಿರುವ ಹುಲಿ, ನಮ್ಮ ಮಕ್ಕಳ ಪಾಲಿಗೆ ನೋಡಲೂ ಸಿಗದ ಹಾಗೆ ಆಗಿಹೋಗಬಹುದು’ ಎಂದು ಕರಣ್‌ ಸಿಂಗ್‌ ಕಳವಳ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.