ADVERTISEMENT

25 ವರ್ಷಗಳ ಹಿಂದೆ | ತೈಲ ಬೆಲೆ ಹೆಚ್ಚಳ ಭಾಗಶಃ ವಾಪಸ್‌: ಪ್ರಧಾನಿ ಭರವಸೆ

ಪಿಟಿಐ
Published 3 ಅಕ್ಟೋಬರ್ 2025, 22:30 IST
Last Updated 3 ಅಕ್ಟೋಬರ್ 2025, 22:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಕಲ್ಕತ್ತಾ, ಅ. 3 ()‍– ತೈಲ ಉತ್ಪನ್ನಗಳ ಬೆಲೆ ಹೆಚ್ಚಿಸಿರುವುದನ್ನು ಭಾಗಶಃ ವಾಪಸು ತೆಗೆದುಕೊಳ್ಳುವ ಬಗ್ಗೆ ಪ್ರಧಾನಿ ನೀಡಿರುವ ಭರವಸೆಯನ್ನು ಅನುಲಕ್ಷಿಸಿ ಕೇಂದ್ರ ಸಚಿವ ಸಂಪುಟಕ್ಕೆ ನೀಡಿರುವ ರಾಜೀನಾಮೆ ಕೈಬಿಡುವ ಬಗ್ಗೆ ಮಮತಾ ಬ್ಯಾನರ್ಜಿ ಅವರು ಇಂದು ಇಲ್ಲಿ ಸ್ಪಷ್ಟ ಇಂಗಿತ ವ್ಯಕ್ತಪಡಿಸಿದರು.

ಅಡುಗೆ ಅನಿಲ, ಡೀಸೆಲ್‌ ಮತ್ತು ಸೀಮೆಎಣ್ಣೆಗೆ ಹೆಚ್ಚಿಸಿರುವ ಬೆಲೆ ಕಡಿಮೆ ಮಾಡುವ ಬಗ್ಗೆ ಇದೇ 6ರಂದು ಕರೆಯಲಾಗಿರುವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಪ್ರಧಾನಿ ವಾಜಪೇಯಿ ಭರವಸೆ ನೀಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಕಾಗವಾಡ: ದಳ(ಯು) ಗೆಲುವು

ADVERTISEMENT

ಬೆಳಗಾವಿ, ಅ. 3– ಕಾಗವಾಡ ವಿಧಾನಸಭಾ ಕ್ಷೇತ್ರದ ಉಪ‍ ಚುನಾವಣೆಯಲ್ಲಿ ಜನತಾದಳ (ಸಂಯುಕ್ತ) ಪಕ್ಷದ ಭರಮಗೌಡ ಅಲಿಯಾಸ್ ರಾಜು ಕಾಗೆ ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿ ಆಡಳಿತಾರೂಢ ಕಾಂಗ್ರೆಸ್‌ನ ವಿಜಯಾತಾಯಿ ಪಾಟೀಲ ಅವರನ್ನು ಕೇವಲ 1,019 ಮತಗಳ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.