ADVERTISEMENT

ಶುಕ್ರವಾರ, 14–1–1994

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 20:15 IST
Last Updated 13 ಜನವರಿ 2019, 20:15 IST

ಸಂಭ್ರಮ ಇಲ್ಲದ ದುಬಾರಿ ಸಂಕ್ರಾಂತಿ

ಬೆಂಗಳೂರು, ಜ.13– ಸುಗ್ಗಿಯ ಸಂಭ್ರಮದ ಸಂಕೇತವಾದ ಸಂಕ್ರಾಂತಿ ನಕ್ಕು ನಲಿದು ಆಚರಿಸಬೇಕಾದ ಸಂಭ್ರಮವನ್ನಂತೂ ತರಲಿಲ್ಲ. ಗಗನಕ್ಕೇರಿರುವ ಬೆಲೆಗಳಿಂದಾಗಿ ಸಂಭ್ರಮವನ್ನೂ ಸಾಂಕೇತಿಕವಾಗಿಯೇ ಆಚರಿಸಬೇಕಾಗಿರುವಂತೆ ಮಾಡಿದೆ.

ಪ್ರತಿದಿನವೂ ವಸ್ತುಗಳ ಧಾರಣೆ ಏರುತ್ತಿರುವುದೇ ಇದಕ್ಕೆ ಕಾರಣ. ಇದರೊಂದಿಗೆ ಅಡುಗೆ ಅನಿಲದ ಸಿಲಿಂಡರ್ ಬೆಲೆಯಲ್ಲಿ 15 ರೂಪಾಯಿಗಳ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಂಕ್ರಾಂತಿಯ ‘ಕೊಡುಗೆ’ ನೀಡಿದೆ.

ADVERTISEMENT

ಈ ಮಧ್ಯೆ ಸಂಕ್ರಾಂತಿಯ ಸಂಕೇತವಾಗಿ ಪರಸ್ಪರ ವಿನಿಮಯ ಮಾಡಿಕೊಳ್ಳುವ ಎಳ್ಳು–ಬೆಲ್ಲದ ಬೆಲೆ ಬಹುತೇಕ ಹೆಚ್ಚಾಗಿದೆ.

ಬಿಕ್ಕಟ್ಟು ಇತ್ಯರ್ಥಕ್ಕೆ ಗಂಭೀರ ಯತ್ನ: ಭಿನ್ನರಿಗೆ ರಾವ್ ಭರವಸೆ

ನವದೆಹಲಿ, ಜ.13– ತೀವ್ರ ಕುತೂಹಲ ಉಂಟುಮಾಡಿರುವ ಕರ್ನಾಟಕದ ಕಾಂಗೈ ಬಿಕ್ಕಟ್ಟು ಇತ್ಯರ್ಥಪಡಿಸುವ ವಿಷಯವನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ. ಇದು ಈಗಿನ ವಿಧಾನಮಂಡಲದ ಅಧಿವೇಶನಕ್ಕೆ ಮುಂಚೆ ಅಥವಾ ನಂತರವೇ ಆಗಬಹುದು. ಈ ಬಗ್ಗೆ ಆತುರ ಮಾಡಬಾರದು ಎಂದು ಪ್ರಧಾನಿ ಹಾಗೂ ಕಾಂಗೈ ಅಧ್ಯಕ್ಷ
ಪಿ.ವಿ. ನರಸಿಂಹರಾವ್ ಭರವಸೆ ನೀಡಿರುವುದಾಗಿ ಅವರನ್ನು ಇಂದು ರಾತ್ರಿ ಭೇಟಿ ಮಾಡಿದ ಭಿನ್ನಮತೀಯ ಸಂಸತ್ ಸದಸ್ಯರ ನಿಯೋಗದ ವಕ್ತಾರರು ಹೇಳಿದರು.

ಹುಬ್ಬಳ್ಳಿ ಈದಗಾ: ಧ್ವಜ ಹಾರಿಸಲು ಬಿಜೆಪಿ ಪಣ

ಹುಬ್ಬಳ್ಳಿ, ಜ.13– ಇದೇ ಜನವರಿ26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ನಗರದ ಮಧ್ಯ ಭಾಗದಲ್ಲಿರುವ ವಿವಾದಿತ ಈದಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಬಿಜೆಪಿ ಮತ್ತು ರಾಷ್ಟ್ರ ಧ್ವಜ ಸಂರಕ್ಷಣಾ ಸಮಿತಿಯು ಜಂಟಿಯಾಗಿ ನಿರ್ಧರಿಸಿವೆ.

ಇಂದು ಇಲ್ಲಿ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಸ್‌. ಯಡಿಯೂರಪ್ಪ ಮತ್ತು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್‌ ಅವರು ಈ ವಿಷಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.