ADVERTISEMENT

25 ವರ್ಷಗಳ ಹಿಂದೆ| ಶನಿವಾರ, 21 ಮಾರ್ಚ್‌ 1998

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 19:30 IST
Last Updated 20 ಮಾರ್ಚ್ 2023, 19:30 IST
   

ಬಾಬಾಗೌಡ ಪಾಟೀಲರಿಗೆ ಗ್ರಾಮೀಣಾಭಿವೃದ್ಧಿ ಖಾತೆ

ನವದೆಹಲಿ, ಮಾ. 20– ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ರಾಜ್ಯ ಸಚಿವರುಗಳಿಗೆ ಇಂದು ಖಾತೆಗಳನ್ನು ಹಂಚಿಕೆ ಮಾಡಿದ್ದು, ಕರ್ನಾಟಕದ ಬಾಬಾಗೌಡ ಪಾಟೀಲ ಅವರಿಗೆ ಗ್ರಾಮೀಣ ಅಭಿವೃದ್ಧಿ ಖಾತೆಯನ್ನು ನೀಡಿ ಸ್ವತಂತ್ರ ಹೊಣೆಗಾರಿಕೆ
ಯನ್ನು ವಹಿಸಿದ್ದಾರೆ.

ಮನೇಕಾ ಗಾಂಧಿ ಅವರಿಗೆ ಕಲ್ಯಾಣ ಖಾತೆ, ಎಐಎಡಿಎಂಕೆಯ ಆರ್‌.ಕೆ. ಅವರಿಗೆ ಹಣಕಾಸು ಸಚಿವ ಖಾತೆಯಲ್ಲಿನ ರೆವೆನ್ಯೂ, ಬ್ಯಾಂಕಿಂಗ್‌, ವಿಮೆ ಹಾಗೂ ಹೆಚ್ಚುವರಿ ಯಾಗಿ ಸಂಸದೀಯ ವ್ಯವಹಾರಗಳನ್ನು ನೀಡಲಾಗಿದೆ.

ADVERTISEMENT

ತಮಿಳುನಾಡಿನ ಪಟ್ಟಾಳಿ ಮಕ್ಕಳ್‌ ಕಚ್ಚಿಯ ದಲಿತ್‌ ಏಳುಮಲೈ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಖಾತೆಯ ಸ್ವತಂತ್ರ ನಿರ್ವಹಣೆಯನ್ನು ವಹಿಸಲಾಗಿದೆ.

ರಾಜ್ಯಸಭೆಗೆ ಬೊಮ್ಮಾಯಿ, ಆಸ್ಕರ್‌, ನಾಯ್ಡು

ಬೆಂಗಳೂರು, ಮಾ. 20– ಕೇಂದ್ರದ ಮಾಜಿ ಸಚಿವ ಎಸ್‌.ಆರ್‌. ಬೊಮ್ಮಾಯಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್‌ ಫರ್ನಾಂಡಿಸ್‌ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ವೆಂಕಯ್ಯ ನಾಯ್ಡು, ಜನತಾದಳದ ಎಚ್‌.ಕೆ. ಜವರೇಗೌಡ ಅವರು ರಾಜ್ಯಸಭಾ ಸದಸ್ಯರಾಗಿ ಇಂದು ಇಲ್ಲಿ ಅವಿರೋಧವಾಗಿ ಆಯ್ಕೆಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.