ADVERTISEMENT

25 ವರ್ಷಗಳ ಹಿಂದೆ ಶನಿವಾರ 26.10.1996

25 ವರ್ಷಗಳ ಹಿಂದೆ ಶನಿವಾರ 26.10.1996

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 19:41 IST
Last Updated 25 ಅಕ್ಟೋಬರ್ 2021, 19:41 IST
   

ಆಲಮಟ್ಟಿ: ಪರಿಶೀಲನೆಗೆ14ರಂದು ತಜ್ಞರ ತಂಡ

ನವದೆಹಲಿ, ಅ. 25 (ಪಿಟಿಐ)– ಆಲಮಟ್ಟಿ ಅಣೆಕಟ್ಟು ವಿವಾದದ ಕುರಿತು ಅಧ್ಯಯನ ನಡೆಸುವ ಸಲುವಾಗಿ ನೀರಾವರಿ ತಜ್ಞರ ನಿಯೋಗವೊಂದು ಮುಂದಿನ ತಿಂಗಳು 14ರಂದು ವಿವಾದಾಸ್ಪದ ಸ್ಥಳಕ್ಕೆ ಭೇಟಿ ನೀಡಲಿದೆ.

ಬಚಾವತ್ ಆಯೋಗದ ತೀರ್ಪನ್ನು ಉಲ್ಲಂಘಿಸಿ ಕರ್ನಾಟಕವು ಆಲಮಟ್ಟಿ ಅಣೆ ಕಟ್ಟಿನ ಎತ್ತರವನ್ನು ಹೆಚ್ಚಿಸುತ್ತಿದೆ ಎಂದು ಆಂಧ್ರಪ್ರದೇಶ ಆರೋಪಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಅಧ್ಯಯನಕ್ಕಾಗಿ ಕಳೆದ ಆಗಸ್ಟ್‌ನಲ್ಲಿ ಸಂಯುಕ್ತರಂಗ ಸರ್ಕಾರ ತಜ್ಞರ ನಿಯೋಗ ವನ್ನು ನೇಮಿಸಿತ್ತು.

ADVERTISEMENT

ಚಿತ್ರದುರ್ಗ ದುರಂತ: ನೀರಿನಿಂದ 61 ಶವ ಮೇಲಕ್ಕೆ– ಮುಂದುವರಿದ ಶೋಧನೆ

ಚಿತ್ರದುರ್ಗ, ಅ. 25– ಚಿತ್ರದುರ್ಗದ ಸಂತೆ ಹೊಂಡದಲ್ಲಿ ಪ್ರಯಾಣಿಕರ ಸಹಿತ ಮುಳುಗಿ ಹೋಗಿದ್ದ ಬಸ್ಸನ್ನು ಮೇಲಕ್ಕೆ ಎತ್ತಲಾಗಿದ್ದು ಈವರೆಗೆ 61 ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ ನೀರಿನಲ್ಲಿ ಉಳಿದಿರಬಹುದಾದ ಶವಗಳಿಗಾಗಿ ಶೋಧನೆ ಮುಂದುವ ರಿದಿದೆ. ಹೊರ ತೆಗೆದ ಶವಗಳನ್ನು ಅವರ ಕುಟುಂಬದವರು ಗುರುತಿಸಿದ್ದು ಅಂತಿಮ ಸಂಸ್ಕಾರಕ್ಕಾಗಿ ಅವರಿಗೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.