ADVERTISEMENT

50 ವರ್ಷಗಳ ಹಿಂದೆ: ಬುಧವಾರ 3.11.1971

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 22:30 IST
Last Updated 2 ನವೆಂಬರ್ 2021, 22:30 IST
50 ವರ್ಷಗಳ ಹಿಂದೆ..
50 ವರ್ಷಗಳ ಹಿಂದೆ..   

ಇಪ್ಪತ್ತನಾಲ್ಕು ಮಂದಿಗೆ ಸನ್ಮಾನ

ಬೆಂಗಳೂರು, ನ. 2– ಕನ್ನಡ ನಾಡಿನ ಚೆಲುವಿಗೆ ಕಾರಣರಾದ 24 ಮಂದಿ ಕಲಾವಿದರು, ಸಾಹಿತಿಗಳನ್ನು ಇಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಜನತೆಯ ಪರವಾಗಿ ಸನ್ಮಾನಿಸಿ ಅವರ ಸೇವೆಯನ್ನು ಕೃತಜ್ಞತೆಯಿಂದ ನೆನೆಯಲಾಯಿತು.

ರಾಜ್ಯದ ಮೂರು ಅಕಾಡೆಮಿಗಳ ಪರವಾಗಿ ಪ್ರಶಸ್ತಿಗಳನ್ನು ನೀಡಿದ ರಾಜ್ಯಪಾಲರು, ಕಲಾವಿದರು ವಯಸ್ಸಾಗುವ
ವರೆಗೆ ಕಾಯದೆ, ಅವರು ಪಾಂಡಿತ್ಯ– ಪ್ರತಿಭೆ ಗಳಿಸಿದ ತರುಣದಲ್ಲೇ ಅವರನ್ನು ಗುರುತಿಸಿ ಸನ್ಮಾನಿಸಬೇಕೆಂದು ಸಲಹೆ ಮಾಡಿದರು.

ADVERTISEMENT

‘ಕಲಾವಿದರಿಗೆ ತುಂಬಾ ವಯಸ್ಸಾಗದ ಕಾರಣ ಅವರನ್ನು ಗೌರವಿಸಬಾರದೆಂಬ ಭಾವನೆ ನಮ್ಮಲ್ಲಿದೆ. ಇದಕ್ಕೆ ಕಾರಣ ತಿಳಿಯದು. ಕಲಾವಿದ ತಾರುಣ್ಯದಲ್ಲೇ ಪ್ರತಿಭೆಯನ್ನು ಗಳಿಸುತ್ತಾನೆ. ಆತ ಪ್ರತಿಭೆ ಗಳಿಸಿದ ಕಾಲದಲ್ಲಿ ಅವನಿಗೆ ಪ್ರಶಸ್ತಿ ಸಲ್ಲಬೇಕಾದುದು ಉಚಿತವಾದದ್ದು’ ಎಂದು ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.