ADVERTISEMENT

25 ವರ್ಷಗಳ ಹಿಂದೆ | ಕಂಪ್ಯೂಟರ್‌ ಶಿಕ್ಷಣ; ಜನವರಿಯಲ್ಲಿ ಜಾರಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 23:40 IST
Last Updated 11 ಡಿಸೆಂಬರ್ 2025, 23:40 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಬೆಂಗಳೂರು, ಡಿ. 11– ಆಯ್ದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್‌ ತರಬೇತಿ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಮಾಹಿತಿ ಸಿಂಧು’ ಬರುವ ಜನವರಿಯಿಂದ ಪ್ರಾರಂಭವಾಗಲಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಉದ್ಘಾಟಿಸಲಿದ್ದಾರೆ.

ಐದು ವರ್ಷಗಳ ಕಾಲ ಸುಮಾರು ರೂ. 204 ಕೋಟಿ ವೆಚ್ಚದ ಈ ಯೋಜನೆಯಲ್ಲಿ  ಮೊದಲ ಹಂತದಲ್ಲಿ ಹೋಬಳಿಯಲ್ಲಿರುವ ಒಂದು ಸಾವಿರ ಪ್ರೌಢಶಾಲೆಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಇದಕ್ಕೆ ರಾಷ್ಟ್ರದಲ್ಲಿ ಕಂಪ್ಯೂಟರ್‌ ತರಬೇತಿ ನೀಡುವಲ್ಲಿ ಪ್ರಖ್ಯಾತವಾಗಿರುವ ಎನ್‌ಐಐಟಿ, ಆಪ್ಟೆಕ್ ಹಾಗೂ ಎಜುಕಾಂ ಡಾಟಾ ಮ್ಯಾಟ್ರಿಕ್ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT