ADVERTISEMENT

50 ವರ್ಷಗಳ ಹಿಂದೆ: ಸೋಮವಾರ, 18–09–1972

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 19:31 IST
Last Updated 17 ಸೆಪ್ಟೆಂಬರ್ 2022, 19:31 IST
   

ಕಾವೇರಿ ಜಲವಿವಾದ: ಒಳಸಂಚಿನ ಶಂಕೆ

ಮೈಸೂರು, ಸೆಪ್ಟೆಂಬರ್‌ 17– ಕಾವೇರಿ ಜಲವಿವಾದದ ಸಂಬಂಧದಲ್ಲಿ ಸಂಬಂಧಿಸಿದ ಮೂವರು ಮುಖ್ಯಮಂತ್ರಿಗಳು ಸಭೆ ಸೇರಿ ವಿಷಯ ಸಂಗ್ರಹಣೆಗೆ ತಾಂತ್ರಿಕ ಸಮಿತಿ ನೇಮಕ ಮಾಡಿದ ಬಗ್ಗೆ ಇಂದು ಇಲ್ಲಿ ಪ್ರಸ್ತಾಪಿಸಿದ ಎಂ.ಪಿ.ಸಿ.ಸಿ. (ಸಂಸ್ಥಾ) ಅಧ್ಯಕ್ಷ ವೀರೇಂದ್ರ ಪಾಟೀಲ್‌ ಅವರು ಬಲವಾದ ಶಂಕೆ ವ್ಯಕ್ತಪಡಿಸಿ, ‘ಏನೋ ಒಳಸಂಚು ನಡೆದಿದೆ’ ಎಂದು ಆರೋಪಿಸಿದರು.‌

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ‘ಅಹುಜ ಶಂಕಿಸಿದಂತೆ ಏನೋ ನಡೆದಿದೆ. ಅದರಿಂದಲೇ ಕಾವೇರಿ ಪಾತ್ರದ ನೀರಾವರಿ ಯೋಜನೆಗಳ ಕೆಲಸ ನಿಧಾನವಾ ಗಿರಬಹುದೆಂದು ಶಂಕಿಸಿ, ಅಂತಿಮವಾಗಿ ಈ ಜಲವಿವಾದವನ್ನು ಪ್ರಧಾನಿ ಇಂದಿರಾಗಾಂಧಿ ಅವರ ತೀರ್ಮಾನಕ್ಕೆ ಬಿಡುವ ಹಾಗೆ ಕಾಣುತ್ತಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.