ADVERTISEMENT

50 ವರ್ಷಗಳ ಹಿಂದೆ: ಭಾನುವಾರ, 21.5.1972

​ಪ್ರಜಾವಾಣಿ ವಾರ್ತೆ
Published 20 ಮೇ 2022, 19:45 IST
Last Updated 20 ಮೇ 2022, 19:45 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಈ ತಿಂಗಳಲ್ಲಿ ರಾಜ್ಯದ ಮುಖ್ಯ ಸಮಸ್ಯೆಗಳಿಗೆ ಕೇಂದ್ರದ ಪರಿಹಾರ

ಬೆಂಗಳೂರು, ಮೇ 20– 70 ಕೋಟಿ ರೂಪಾಯಿಗಳ ಓವರ್‌ಡ್ರಾಫ್ಟ್ ಮರುಪಾವತಿ ಅದರ ಸುಮಾರು ಅರ್ಧದಷ್ಟಿರುವ ಬಜೆಟ್ ಕೊರತೆ ಮುಂತಾದ ರಾಜ್ಯದ ಕೆಲವು ಮುಖ್ಯ ಆರ್ಥಿಕ ಸಮಸ್ಯೆಗಳಿಗೆ, ಈ ತಿಂಗಳ ಕೊನೆಯಲ್ಲಿ ಕೇಂದ್ರದಿಂದ ಪರಿಹಾರ ದೊರೆಯಲಿದೆ.

ಈ ದೊಡ್ಡ ಸುದ್ದಿಯನ್ನು ಇಂದು ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದ ರಾಜ್ಯ ಅರ್ಥ ಮಂತ್ರಿ ಶ್ರೀ ಎಂ.ವೈ, ಘೋರ್ಪಡೆ ಅವರು ಸಮಸ್ಯೆ ಪರಿಹಾರ ಮತ್ತು ನೆರವಿನ ಒಪ್ಪಂದಗಳನ್ನು ಕೇಂದ್ರದೊಡನೆ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಾಜ್ಯದ ಅಧಿಕಾರ ವ್ಯವಸ್ಥೆಯನ್ನು ಪೀಡಿಸು ತ್ತಿರುವ ಹಲವು ವ್ಯಾಧಿಗಳ ಬಗ್ಗೆ ಕೇಂದ್ರ ಅರ್ಥ ಮಂತ್ರಿ ಮತ್ತು ಯೋಜನಾ ಮಂತ್ರಿ ಗಳೊಡನೆ ಅವರು ಚರ್ಚೆ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.