ರಂಗ– ಕಾಂಗ್ರೆಸ್ ನಾಯಕರ
ಮಾತುಕತೆ ಇಂದು ಸಂಭವ
ನವದೆಹಲಿ, ಏ. 3– ಸಂಯುಕ್ತ ರಂಗ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಂಡಿರುವ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕೆಂದು
ಕಾಂಗ್ರೆಸ್ಸಿಗೆ ರಂಗ ಚಾಲನಾ ಸಮಿತಿಯು ಮಾಡಿರುವ ಮನವಿಯ ನಿರ್ಣಯವನ್ನು ಪಕ್ಷಕ್ಕೆ ಇಂದು ಅಧಿಕೃತವಾಗಿ ತಲುಪಿಸಲಾಗಿದ್ದು ನಾಳೆಯಿಂದ ಉಭಯ ಪಕ್ಷಗಳ ನಡುವಣ ಅಧಿಕೃತ ಮಾತುಕತೆಗಳಿಗೆ ದಿಕ್ಸೂಚಿಯಾಗುವ ಸಂಭವ ಇದೆ.
ಈ ಮಧ್ಯೆ ಕಾಂಗ್ರೆಸ್ ಸರ್ಕಾರ ರಚಿಸುವ ಪರಿಸ್ಥಿತಿ ಬಂದರೆ ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ಅವರು ಪ್ರಧಾನಿ ಸ್ಥಾನಕ್ಕೆ ಅಭ್ಯರ್ಥಿಯಲ್ಲ ಎಂಬುದಾಗಿ ಪಕ್ಷದ ನಂಬಲರ್ಹ ಮೂಲಗಳು ಸ್ಪಷ್ಟಪಡಿಸಿವೆ. ಆದರೆ ಸಂಯುಕ್ತ ರಂಗದ ನಾಯಕರೊಡನೆ ಮಾತುಕತೆ ನಡೆದರೂ, ನಾಯಕತ್ವ ಬದಲಾವಣೆ ವಿಷಯದಲ್ಲಿ ಕಾಂಗ್ರೆಸ್ ನಿಲುವಿನಲ್ಲಿ ಬದಲಾವಣೆ ಇಲ್ಲ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.